ಒಂದು ಮನ್ವಂತರದಿಂದ ಇನ್ನೊಂದು ಮನ್ವಂತರಕ್ಕೆ
೧೮೦೦ ವರ್ಷ.
ವ್ಯವತ್ಸರ ಮನ್ವಂತರ - ಮನು ಬೊಗಸೆಯಲ್ಲಿ ನೀರಿನಲ್ಲಿ ಮೀನು ಕಾಣಿಸುತ್ತದೆ. ಕೆರೆಯಲ್ಲಿ, ನದಿಯಲ್ಲಿ, ಸಮುದ್ರದಲ್ಲಿ ಬೆಳೆಯುತ್ತಾ ಹೋಗುತ್ತೆ. ಇದು ಮತ್ಸ್ಯಾವತಾರ. ವ್ಯವತ್ಸರ ಮನ್ವಂತರ ಪ್ರಾರಂಭವಾದಾಗ ವಿಚಿತ್ರವಾದ ರೂಪ.
ಮತ್ಸ್ಯಾವತಾರ ವೇದ ಜ್ಞಾನ ಪ್ರಸಾರಮಾಡಿದ ರೂಪ. ವೇದಾಭಿಮಾನಿದೇವತೆಗಳಿಂದ
ವೇದವನ್ನು ಅಪಹಾರ ಮಾಡಿದ ಅಸುರನನ್ನು ಸಂಹರಿಸಿ ವೇದಾಭಿಮಾನಿ ದೇವತೆಗಳಿಗೆ ಮಾತ್ರ ಜ್ಞಾನ ಪ್ರಸಾರ
ಮಾಡಿದ ಭಗವಂತ ಮತ್ಸ್ಯಾವತಾರ ರೂಪದಿಂದ. ಎಲ್ಲಾ ರೂಪವು
ಜ್ಞಾನಾಂದಮಯ. ಪ್ರಳಯ ಕಾಲದಲ್ಲಿ ನಡೆದ ಘಟನೆ. ಮತ್ಸ್ಯ, ಕೂರ್ಮ, ಆಮೇಲೆ ಅಮೃತ ಹಿಡಿದುಕೊಂಡು ಬಂದ ಧನ್ವಂತರಿ.
ಅಮೃತ ಹಿಡಿದುಕೊಂಡು ಬಂದ ಮೊಹಿನಿ. ಜ್ಞಾನದ ಅಮೃತ ನಮ್ಮ ಒಳಗೆ ಮಥನ ನಡೆಯುತ್ತಿದೆ. ಜ್ಞಾನ ಆ ಅಮೃತ ಕೆಳಗೆ ಹಿಡಿದ ಧನ್ವಂತರಿ ಬರುತ್ತಾನೆ. ಧನ್ವಂತರಿ ವೈದ್ಯ ಶಾಸ್ತ್ರದ ಮೂಲ ರೂಪ. ನಿಜವಾದ ಅಮೃತ ಜ್ಞಾನ. ಧನ್ವ ಅಂದರೆ ಮರಭೂಮಿಯನ್ನು ಧಾಟಿಸುವ ಧೋಣಿ. ಮರಭೂಮಿ ಅಂದರೆ ಸಂಸಾರ. ಅದನ್ನು ಪಾರುಮಾಡಿಸುವ ಶಕ್ತಿ ಧನ್ವಂತರಿಗಿದೆ. ಜ್ಞಾನ ತಂದುಕೊಟ್ಟ ಭಗವಂತ. ದುಷ್ಟ ಶಕ್ತಿ ಸ್ತ್ರೀ ರೂಪದಿಂದ ಬಂದ ಭಗವಂತ. ನಮ್ಮ ನಿರಂತರ ಹೋರಾಟ ಧನ್ವಂತರಿ ಶಕ್ತಿ.
ಬ್ರಹ್ಮಾಂಡ ಮೊದಲು ಸೃಷ್ಟಿ ಆಯಿತು. ಪ್ರಳಯ, ಸೃಷ್ಟಿ, ಪ್ರಳಯ, ಸೃಷ್ಟಿ, ......ಇದು ನಿರಂತರ
ಆಗುತ್ತಿರತ್ತೆ.
ಪರಿತೀಕ್ಷಿತ್ ರಾಜನ ಪ್ರೆಶ್ನೆಗೆ ಶುಕ್ಲಾಚಾರ್ಯರು ಅಂತರಂಗ ಸಾಧನೆ ಹೇಗೆ ಮಾಡಬೇಕು ಅಂತ ಹೇಳುತ್ತಾರೆ. ಒಂದು ವಾರ ಮನಸ್ಸಿನಲ್ಲಿ ಕಾನ್ಸ್ಟೆಂಟ್ ಆಗಿ (ಮೆಡಿಟೇಶನ್)
ಚಿಂತನೆ ಮಾಡು. ಮನಸ್ಸಿಗೆ ನಿಶ್ಚಲ ಸ್ಥಿರ ಕೊಡುವದು
ಆಸನ ಮತ್ತು ಪ್ರಾಣಾಯಾಮ. ಮನಸ್ಸು ಏಕಾಗ್ರತೆ ಮಾಡಿ
ಚಿಂತನೆ ಮಾಡು. ಇದು ಧ್ಯಾನದ ಇನಿಶಿಯಲ್ ಸ್ಟೇಜ್.
ಸೂರ್ಯ ಮಂಡಲ, ಅದರಲ್ಲಿ ಭಗವಂತ. ಎಲ್ಲಾ ವಸ್ತುವಿನಲ್ಲಿ ಆಮ್ನಿಪೊಟೆಂಟ್ ಭಗವಂತ ಇದ್ದಾನೆ. ಪರೀಕ್ಷಿತ್ ರಾಜ ಚಿಂತನೇಯ ಉದ್ದೇಶವೇನು? ಚಿಂತನೆ ಯಾವ ಫಲಕ್ಕೋಸ್ಕರ ಮಾಡಬೇಕು?
ಅಂತ ಕೇಳುತ್ತಾನೆ. ಶುಕ್ಲಾಚಾರ್ಯ:
-ಧ್ಯಾನದಿಂದ ಒಳಗೆ ಸುಖ ತೆರೆಯುತ್ತದೆ. ಆನಂದವೆ ದೊಡ್ಡ
ಫಲ. ಏನು ಬಯಸದೆ ಧ್ಯಾನ ಮಾಡು. ಅಂತರಂಗದ ಆನಂದವೆ ಫಲ. ಸೂರ್ಯ ಉದಯಿಸಿವದು, ಮುಳುಗುವದು. ಜೀವನದಲ್ಲಿ ೨೪ ಗಂಟೆ ಮ್ಯನಸ್ ಆಗುವದು. ನೀನು ಮುಳಗುತ್ತಿರುವದು. ನಾನಲ್ಲ ಎಂದು ಎಚ್ಚರಿಸುತ್ತಾರೆ. ಬದುಕಿನ ನಶ್ವರತೆ ತೋರಿಸುತ್ತದೆ. ಬದುಕನ್ನು ಸಾರ್ಥತೆ ಮಾಡಿಕೊಳ್ಳಬೇಕು. ಭಗವಂತನ ಚಿಂತನೆಯಿಂದ ಕಾಲ ಕಳೆಯಬೇಕು.
ಶ್ರವಣಕರು ಹೇಳಿದ್ದು. ಮರಕ್ಕೆ ಬದುಕು, ಎಚ್ಚರ ಇಲ್ಲ. ನಾವು ಉಸಿರಾಡುತ್ತೀವಿ. ಸಂಸಾರ ಇದೆ.
ಬೇಕಾದನ್ನು ನೋಡುತ್ತೀವಿ. ಸೆಕ್ಸ್ ಆನಂದ
ಕೊಡುತ್ತೆ. ಮನುಷ್ಯನಾಗಿ ಬದುಕು. ನಾಯಿ, ಹಂದಿ, ಕತ್ತೆ ಅಂತೆ ಉಂಡಿ ಬದುಕುವ ಭಗವಂತನ ಎಚ್ಚರವಿಲ್ಲದವನು. ಅದು ಪ್ರಾಣಿಗಳ ಬದುಕು.
ಪರೀಕ್ಷಿತರಾಜ ೩೦ ವರ್ಷ ಕಾಲ ರಾಜ್ಯಭಾರ ಮಾಡಿದ. ಹಾವು ಕಚ್ಚಿ ಸಾಯುವ ಪಸಂಗದಿಂದ ದೇಹವನ್ನು ಅಂಟಿಸಿಕೊಳ್ಳುವದಿಲ್ಲ. ಅವನ ಹೆಂಡತಿಗೋಸ್ಕರ ಬದುಕಬೇಕು. ದ್ರೋಣಾಚಾರ್ಯರು ಮದುವೆ ಮಾಡಿಕೊಂಡರು. ಅಶ್ವತ್ಥಾಮ ಹುಟ್ಟಿದ. ಮನೆ ಆಯಿತು. ವನ ಕಟ್ಟಬೇಕಾಯಿತು. ಬಂಧನ ಹೆಚ್ಚಿಸಿಕೊಂಡು ಹೋಗುತ್ತಾರೆ. ಬಂಧುಗಳು, ಭಂಧನಗಳು ಸಾಮಾನ್ಯ ಜನರ ತಲೆಯಲ್ಲಿ
ತುಂಬಿರುವದು. ಕತ್ತಲೆಯಿಂದ ಬೆಳಕಿಗೆ ಹೇಗೆ ಹೋಗಬೇಕೆಂದು
ಪರೀಕ್ಷಿತ ರಾಜ ಕೇಳಿಕೊಳ್ಳುತ್ತಾನೆ.
ವಿಶ್ವದ ರಹಸ್ಯ, ಸೃಷ್ಟಿಯ ರಹಸ್ಯ ಹೇಳುತ್ತಾರೆ. ಭಗವಂತನ ಅವತಾರ ಹೇಳುತ್ತಾರೆ. ಜಗತ್ತು ಹೇಗೆ ಸೃಷ್ಟಿ ಆಯಿತು? ಮಹತತ್ವ ಸೃಷ್ಟಿ ಆಯಿತು. ಪ್ರಳಯ ಕಾಲದಲ್ಲಿ, ನಿದ್ರಾ ಸ್ಥಿತಿಯಲ್ಲಿ
ಬ್ರಹ್ಮಾಂಡದಲ್ಲಿ ನಿದ್ರೆಯಲ್ಲಿ ಜೀವಕ್ಕೆ ಅವೇರ್ನೆಸ್ಸ್ ಆಫ಼್ ಎಗ್ಸಿಸ್ಟೆನ್ಸ್ ಆಯಿತು. ಅದೇ ಮಹಾತತ್ವ.
ಆಗ ಚತುರ್ಮುಖ ಬ್ರಹ್ಮ ಸೃಷ್ಟಿ ಆದ. ಬ್ರಹ್ಮ
ದೇವ ಸೃಷ್ಟಿ ಆದಮೇಲೆ ಜೀವಗಳಿಗೆ ಅರಿವಾಯಿತು. ಅಹಂಕಾರ
ತತ್ವ ಸೃಷ್ಟಿ ಆಯಿತು. ನಮಗೂ ಪ್ರಪಂಚಕ್ಕೂ ಸಂಬಂಧ
ಬೆಳೆಸಿದ್ದು ಅಹಂಕಾರ ತತ್ವ. ಆಹಂಕಾರ ಮೂರು ಕಣ್ಣುಗಳು
ಇದ್ದ ಹಾಗೆ. ಸಾತ್ವೀಕ(ಜ್ಞಾನ), ರಾಜಸ(ಕ್ರಿಯಾ ಶಕ್ತಿ), ತಾಮಸ(ದ್ರವ್ಯಗಳು). ಅಹಂಕಾರದಿಂದ ಪಂಚಭೂತ ಸೃಷ್ಟಿ ಆಯಿತು. ಅಹಂಕಾರ ತತ್ವ ಶಿವ. ಶಿವನಿಂದ ಗಣೇಶ ಹುಟ್ಟಿದ. ಆಕಾಶ ಅಂದರೆ ಸ್ಪೇಸ್. ಅನಾದಿ ಕಾಲದಿಂದ ಇತ್ತು. ಆಕಾಶದಲ್ಲಿ ಅಲ್ಟ್ರಾ ವ್ಯಲೆಟ್ ರೇಸ್ ತುಂಬಿದೆ. ಕಣ್ಣಿಗೆ ಕಾಣದ ನೀಲವರ್ಣ. ಇದು ವೇದದಲ್ಲಿ ಹೇಳಿದೆ. ನೀಲವರ್ಣ(ಅಲ್ಟ್ರಾ ವ್ಯಲೆಟ್), ಅದೇ ಗಣಪತಿ ಸೃಷ್ಟಿ. ನಿಜವಾದ ಆಕಾಶ ಮಹಾ
ಆಕಾಶ. ಎನ್ ಅಟ್ಮಾಸ್ಫ್ಹೆರ್ ಈಸ್ ಕ್ರಿಏಟೆಡ್ ಇನ್
ದಿ ಸ್ಪೇಸ್. ಮಡಿಕೆ ಒಳಗೆ ಆಕಾಶ. ಮನೆ ಒಳಗೆ ಆಕಾಶ. ಡಿವಿಜ಼ನ್ ಬಂತು. ಒಳಗೆ ಹೊರಗೆ ಆಕಾಶ. ಈ ೩ ಕಾನ್ಸೆಪ್ಟನಿಂದ ಪ್ರಪಂಚ ಸೃಷ್ಟಿ ಆಯಿತು. (ಮಣ್ಣು, ನೀರು, ಆಕಾಶ). ಬೆಂಕಿ, ಗಾಳಿ, ಆಕಾಶ ಪ್ರಾಣಮಯ ಕೋಶ. ಇಂದ್ರಿಯ, ಮನಸ್ಸಿನ ಸೃಷ್ಟಿ ಆಯಿತು.
ಆಕಾಶದಿಂದ ಶಬ್ದ ಹುಟ್ಟಿತು. ಶಬ್ದದಿಂದ ಕಿವಿ ಹುಟ್ಟಿತು. ಗಾಳಿಇಂದ ಸ್ಪರ್ಶ. ಸ್ಪರ್ಶದಿಂದ ಚರ್ಮ(ಸ್ಕಿನ್) ಹುಟ್ಟಿತು. ಬಣ್ಣದ ಹೂ, ಬಣ್ಣದ ಎಲೆ - ಬಣ್ಣಗಾರಿಕೆ. ಬಣ್ಣವನ್ನು ನೋಡುವದು ಕಣ್ಣು. ರೂಪ ಬಂತು.
ನೀರು - ರುಚಿ -ಕುಡಿದೆವು. ರಸ ಬಂತು - ನಾಲಿಗೆ
ಬಂತು. ಮಣ್ಣಿನಲ್ಲಿ ಗಂಧ ಸೃಷ್ಟಿ ಆಯಿತು.- ಮೂಗಿಗೆ. ಇವು ಪಂಚ ಜ್ಞಾನೇಂದ್ರಿಯಗಳು. ಬಾಯಿ, ಕೈ, ಕಾಲು, ಮಲಮೂತ್ರ - ಕರ್ಮೇಂದ್ರಿಯಗಳು ಸೃಷ್ಟಿ ಆಯಿತು. ಮನಸ್ಸಿಗೂ ಒಳಗೆ ಒಂದು ವ್ಯವಸ್ಥೆ ಬೇಕು. ಒಳಗೆ ಬುದ್ದಿ(ಇನ್ಟಲೆಕ್ತ್) - ಯಾವುದು ಬೇಕು,
ಬೇಡ(ಡಿಸಿಶನ್). ನಾನು ಎನ್ನುವ ಅಹಂಕಾರ. ಎಚ್ಚರ. ಇಮ್ಪ್ರೂವ್ಮೆಂಟ್ ನೆನಪಿನಿಂದ. ಚಿತ್ತದವಿಸ್ತಾರ - ಚೇತನ. ಮನಸ್ಸು, ಬುದ್ದಿ, ಅಹಂಕಾರ, ಚಿತ್ತ, ಚೇತನ.
ಕಣ್ಣಿನ ದೇವತೆ - ಸೂರ್ಯ,
ನೀರಿನ ದೇವತೆ - ವರುಣ ನಾಲಿಗೆಯದೇವತೆ - ವರುಣ, ಬಾಯಿ - ಜ್ಞಾನದ ಪ್ರಸಾರ, ಮುಖ್ಯ ವಾಗೀಂದ್ರಿಯ ನುಡಿದುವವನು - ಅಗ್ನಿ ದೇವ, ಕೈ ಚಮತ್ಕಾರ
ನಿಯಂತ್ರಿಯ ದೇವತೆ - ಇಂದ್ರ(ದೇವೇಂದ್ರ), ನಡೆಯುವದು - ಇಂದ್ರನ ಮಗ ಜಯಂತ,
ಉಸಿರಾಡುವುದಕ್ಕೆ - ಅಹಂ ಪ್ರಾಣ - ಶಿವ ನಿದ್ರೆ - ಯಮ.
ಕ್ವಾಲಿಟಿ ಅಸಾದಾರಣ ಕ್ವಾಲಿಟಿ ಶಬ್ದ. ಈಥರ್ ಈಸ್ ಕ್ರಿಯೇಟೆಡ್. ಈಥರ್ನಲ್ಲಿ.......... ಸೌಂಡ್
ವಯಬ್ರೇಶನ್ ಅಲೆ ಒಳಗೆ ವೇಕ್ಯುಂ ನಾದ ಸೃಷ್ಟಿ
ಆಯಿತು. ನಾದ ಅಂದರೆ ಭಾಷ್ಯ. ಭಾಶೆ ಇಲ್ಲದಿದ್ದರೆ, ಆಕಾಶ ಇಲ್ಲ್ದಿದ್ದರೆ, ನಾದ ಇಲ್ಲದಿದ್ದರೆ ಕಮ್ಯುನಿಕೇಶನ್ ಇರುತ್ತಿರಲಿಲ್ಲ.
ಆಕಾಶದ ಮೂಲಭೂತ ಶಬ್ದ. ಏರ್ ಈಸ್ ಕ್ರಿಏಟೆಡ್. ಗಾಳಿ ಬೀಸಿತು.
ಆಕಾಶದಿಂದ ಗಾಳಿ ಬೀಸಿದಾಗ ನಮಗೆ ತಾಕಿತು.
ಗಾಳಿಯು ಸೃಷ್ಟಿ ಆಯಿತು. ಗಾಳಿ ಶಬ್ದ ಒಯ್ಯುವುದಕ್ಕೆ
ಶುರುವಾಯಿತು. ಗಾಳಿಯ ಸ್ಪರ್ಶವು ನಮ್ಮ ಇಂದ್ರಿಯಕ್ಕೆ
ಅನುಭವವಾಯಿತು. ಎರಡನೆ ಪಂಚಭೂತ ಗಾಳಿ. ಗಾಳಿಯ ಗುಣ ಸ್ಪರ್ಶ. ಗಾಳಿಯಿಂದ ಬೆಂಕಿ ಆಯಿತು. ಇದು ವಿಶಿಷ್ಟ ಗುಣ. ಗಾಳಿ, ಆಕಾಶ
ಕಾಣುತ್ತಿರಲಿಲ್ಲ. ಬೆಂಕಿಯಲ್ಲಿ ಶಬ್ದ ಇದೆ. ದಗ ದಗ ಬೆಂಕಿ.
ಬೆಂಕಿ ಕಾಣುತ್ತೆ. ಬೆಂಕಿ ಉಲ್ಬಣವಾದಾಗ ನೀರು
ಹುಟ್ಟತ್ತೆ. (ಸೆಕೆ - ಒಳಗೆ ಬೆಂಕಿ ಇದ್ದಾಗ ಹೊರಗೆ
ನೀರು ಬರುತ್ತೆ). ನೀರಿಗೆ ರೂಪ ಇದೆ. ಕಾಣುತ್ತದೆ.
ನೀರು ಗಟ್ಟಿ ಆಯಿತು. ಅದೇ ಭೂಮಿ ಆಯಿತು. ಸಾಲಿಡ್ ಆಗುವುಅಕ್ಕೆ ನೀರು ಅಯ್ಸ್ ಆಯಿತು. ಅಯ್ಸ್ ಹಿಮಗಡ್ಡೆ
ಆಯಿತು(ಗ್ಲೇಜ಼ಿಯರ್). ಇದು ಬಂಡೆ (ಗ್ರಾನೈಟ್) ಆಯಿತು.
ಪೆನ್ಸಿಲ್ವೇನಿಯಾಲ್ಲಿ ಒಂದು ಗುಹೆ ಇದೆ.
ಅಲ್ಲಿ ನೀರು ಗಟ್ಟ್ಟಿಯಾಗಿ ಶಿಲೆಯಾಗಿರುವದನ್ನು ನೋಡಬಹುದು. ಮಣ್ಣಿನಲ್ಲಿ ಕಪ್ಪಿನ ಅಂಶ ಜಾಸ್ತಿ. ಭೂಮಿಯಲ್ಲಿ ಸೃಷ್ಟಿಯಾಗಿ
ನಾವು ತಿನ್ನುವ ವಸ್ತು ಮಣ್ಣಿನಿಂದ ಮಾಡಿದೆ. ಮಣ್ಣು,
ನೀರು, ಬೆಂಕಿ, ಗಾಳಿ,
ಆಕಾಶ ಪಂಚ ಭೂತಗಳು. (ಭುವಃ:ಅಂತರಿಕ್ಷ,
ಸುವಃ:ಸ್ವರ್ಗ).ಬ್ರಹ್ಮಾಂಡ ಸೃಷ್ಟಿಆಯಿತು. ಪಂಚಗಳ ಪ್ರಪಂಚ.
ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು. ಮನು ಮಾನವ ಕುಲದ ಮೂಲ ಪುರುಷ. ಆಕೂತಿ ರುಚಿ ಇಂದ ಬಂದ ಯಜ್ಞ ನಾರಾಯಣ ಅಸುರರನ್ನು ನಾಶಗೊಳಿಸಿದ.
ದೇವಭೂತಿ, ಕರ್ದಮ ಋಷಿ ಇಂದ ಕಪಿಲ ರೂಪದಿಂದ ಭಗವಂತ ಅವತರಿಸಿದ. ಈ ರೂಪದಿಂದ ಜಗತ್ತಿಗೆ ಜ್ಞಾನ ಕೊಟ್ಟ. ಸಾಂಖ್ಯ ಶಾಸ್ತ್ರದಿಂದ ಜ್ಞಾನ ಕೊಟ್ಟ. ನ್ಯೂಮರಾಲಿಜಿ ಮೂಲಕ ಕಪಿಲದೇವರು ಜ್ಞಾನ ಕೊಟ್ಟ. ಮೊದಲು ಪಾಠ ಹೇಳಿದ್ದು ತಾಯಿಗೆ. ಜ್ಞಾನದಲ್ಲಿ ಯೋಗಸಿದ್ದಿಗೆ
ದತ್ತಾತ್ರಯ ಅವತಾರ. ಆತ್ರೀಯ, ಅನುಸೂಯದಿಂದ ದತ್ತಾತ್ರೆಯನ ಅವತಾರ. ನಾನು
ನಿಮಗೆ ದತ್ತ ಅಂತ ಹೇಳಿದ ದೇವರು. ಕಾರ್ತಿಕ ಅರ್ಜುನ ದತ್ತಾತ್ರೆಯನ ಶಿಷ್ಯ. ಯದು ವಂಶದ ಅವತಾರ ದತ್ತಾತ್ರೆಯನದು. (ಯದು ವಂಶದ ಮೂಲ ಪುರುಷ
ಯಮ.). ಉತ್ಥಾನಪಾದನ ಮಗ ಧ್ರುವ. ಸುನೀತಿ, ಸುರಚಿ ಇಬ್ಬರು ಹೆಂಡತಿಯರು
ಅವನಿಗೆ. ಸುನೀತಿಯ ಮಗ ಧ್ರುವ. ಧ್ರುವನಿಗೆ ತಂದೆಯ
ತೊಡೆಯಮೇಲೆ ಕೂತುಕೊಳ್ಳಲು ಹೋದಾಗ ಸುರುಚಿ ಬಿಡುವದಿಲ್ಲ. ಆಗ ಧ್ರುವ ತಾಯಿಯ ಹತ್ತಿರ ಬರುತ್ತಾನೆ. ಸುನೀತಿ ಧ್ರುವನಿಗೆ ಕಾಡಿಗೆ ಹೋಗುವಂತೆ ಆಜ್ಞಾಪಿಸುತ್ತಾಳೆ. ಆಗ ಧ್ರುವನಿಗೆ ಐದು ವರ್ಷ. ಧ್ರುವ ಕಾಡಿಗೆ ಹೋಗುತ್ತಾನೆ ೮ ತಿಂಗಳು ಧ್ಯಾನ ಮಾಡಿದ. ಧ್ರುವ ೫ ವರ್ಷದ ಮಗು ಆ ಮಗುವಿಗೆ ದೇವರಿದ್ದಾನೆ ಅಂತ ಕನ್ವಿಕ್ಷನ್ ಇತ್ತು. ಧ್ರುವನಿಗೆ ಒಳಿದು ಬಂದ ಭಗವಂತ. ವಾಸುದೇವ ಅವತಾರ ಮಾಡಿದ. ಧ್ರುವ ಪದವಿ ಕೊಟ್ಟ. ಉತ್ಥಾನಪಾದ ವಂಶದಲ್ಲಿ ವೇನ ಅಂತ ರಾಜ ಬಂದ. ವೇನ ಅಂದರೆ ಪ್ರಾಣದೇವರು. ಅಂಗರಾಜನ ಮಗ ವೇನ. ವೇನ ಹುಡುಗನಾಗಿದ್ದಾಗ ಲೋಕ ಕಂಟಕನಾಗಿದ್ದ. ಅಂಗರಾಜ ಪರಿತಪಿಸಿದ. ಅಂಗರಾಜ ಒಂದು ದಿನ ಮಧ್ಯ ರಾತ್ರಿ ಅರಮನೆ ಬಿಟ್ಟು ಹೊರಟುಹೋದ. ವೇನ ಯಾರು ದೇವರ ಪೂಜೆಮಾಡಬಾರದು ಅಂತ ಆರ್ಡರ್ ಹೊರಡಿಸಿದ. ವೇದ ಯಾವ ಧರ್ಮವನ್ನೂ ನಂಬಲಿಲ್ಲ. ಆಡಳಿತ ಕುಸಿಯಿತು. ಇಡೀ ದೇಶ ಅವ್ಯವಸ್ಥೆ ಆಯಿತು. ಬರಗಾಲ ಬಂತು. ಹಿಂದಿನ ಕಾಲದಲ್ಲಿ ಡೆಮಾಕ್ರಸಿ ಇತ್ತು. ಋಷಿಗಳು ವೇನನನ್ನು ಸಿಂಹಾಸನದಿಂದ ಎಸೆದು ಕೊಂದರು. ಆಗ ಒಂದು ಶಕ್ತಿ ಹುಟ್ಟಿತು. ಅವನೇ ಪೃಥ್ವಿ ರಾಜ. ಅವನ ಮಗಳೇ ಪೃಥ್ವಿ. ಕೃಷಿ, ನೀರಾವರಿ, ಹೋಮ ಎಲ್ಲಾ ನಾಗರೀಕ ವ್ಯವಸ್ಥೆ ಮಾಡಿದವನೆ
ಪೃಥ್ವಿ ಚಕ್ರವರ್ತಿ. ಪ್ರಿಯವರ್ತನ ಮಗ ವೃಷಭ ದೇವರಾಗಿ ಅವತರಿಸಿದ. ವೃಷಭನ ಮಗನೇ ಭರತ ಚಕ್ರವರ್ತಿ. ಅವನಿಂದಲೆ ಈ ದೇಶಕ್ಕೆ ಭಾರತ ಅಂತ ಹೆಸರು ಬಂದಿದ್ದು. ಭಾರತ ಅಂತ ಈ ದೇಶಕ್ಕೆ ಹೆಸರುಕೊಟ್ಟ ತಂದೆ ವೃಷಭ. ವೃಷಭ ದೇವರನ್ನೆ ಆದಿತ್ಯ ತೀರ್ಥರು ಎಂದು ಜೈನರು ಹೇಳುತ್ತಾರೆ. ನಾಭಿ ಚಕ್ರವರ್ತಿ ದೇವರಂತ ಮಗು ಬೇಕು ಅಂತ ತಪಸ್ಸುಮಾಡಿದ. ಅವನೆ ವೃಷಭ ಚಕ್ರವರ್ತಿಯಾಗಿ ಬಂದ. ವೃಷಭ ಮಗನನ್ನು ಸಿಂಹಾಸನದ ಮೇಲೆ ಕೂಡಿಸಿ ಬಟ್ಟೆಬರೆ ತೆಗೆದು
ಬತ್ತಲೆಯಾಗಿ ಹೋದ. ತನ್ನ ಕೂದಲನ್ನು ತಾನೆ ಕಿತ್ತುಕೊಂಡ. ವ್ಯರಾಗ್ಯದ ಪರಾಕಾಷ್ಟ. ಸೃಷ್ಟಿ ಆದಿಯಲ್ಲಿ ಅವಿಷ್ಕಾರಮಾಡಿದ ರೂಪ ಹಯವದನ ರೂಪ ಚಿತ್ರಗುಪ್ತರಿಗೆ ಹಯಗ್ರೀವ ರೂಪದಿಂದ ವೇದದ ಅನುಭವ. ಹಯ ಎನ್ನುವ ಶಬ್ದ ವೇಗವಾಗಿ ಓಡುವ ಪ್ರಾಣಿ. ಕೂರ್ಮ ಅವತಾರ ಎರಡು ಭಾರಿ ಆಗಿದೆ. ಪರ್ವತವನ್ನು ಎತ್ತರ ಹಿಡಿದು ಅಮೃತ ಬರುವದು. ಇದರ ಸಂಕೇತವೇನು? ಮನಸ್ಸು ಏರಿದರೆ ಪರ್ವತ. ಸದ್ಗುಣ, ದುರ್ಗುಣದಿಂದ ಶಾಸ್ತ್ರ
ಮಥನ ನಡೆಯಬೇಕು ಜ್ಞಾನ ಅಮೃತ ಸಹಿತ. ತಾಪಸ ಮನ್ವಂತರದಲ್ಲಿ
ಭಗವಂತ ತಾಪಸನಾಗಿ ಅವತರಿಸಿದ. ತಾಪಸ ರೂಪದಿಂದ ಗಜೇಂದ್ರ ಮೋಕ್ಷ. ಶಾಪಗ್ರಸ್ತನಾದ ರಾಜ ಆನೆ ನೀರು ಕುಡಿಯಲು ಹೋದಾಗ ಅಲ್ಲಿ
ಮತ್ತೊಂದು ಶಾಪಗ್ರಸ್ತನಾದ ಮೊಸಳೆ (ಗಂಧರ್ವ) ಆನೆಯ
ಕಾಲು ಹಿಡಿಯುತ್ತೆ. ನೀರಿನಲ್ಲಿ ಮೊಸಳೆ ಆನೆಗಿಂತ
ಬಲಿಷ್ಥ. ಇದು ಸೃಷ್ಟಿಯ ವ್ಯಚಿತ್ರ. ಒಂದು ತಾವರೆಯನ್ನು ಎತ್ತಿ ಅದನ್ನು ಭಗವಂತನಿಗೆ ಅರ್ಪಿಸಿ
ಭಗವಂತನನ್ನು ಕರೆಯುತ್ತಂತೆ. ದೇವರಿಗೆ ಅಂತರಂಗದ ಕರೆ
ಬೇಕು. ಭಗವಂತ ಓಡಿ ಬಂದ. ಅವನೇ ತಾಪಸ.
ಭಗವಂತ ಮೊಸಳೆಯ ಕತ್ತು ಕತ್ತರಿಸಿದ. ಮಹೀದಾಸ
ಅವತಾರ. ಡಿವ್ಯನ್ ಅವತಾರ. ನಿಗೂಡವಾದ ಅವತಾರ. ವಿಶಾಲ ಋಷಿಗೆ ಇಬ್ಬರು ಹೆಂಡತಿಯರು. ಎರಡನೆ ಹೆಂಡತಿಯ ಹೆಸರು ಇತರ. ಅವಳಿಂದ ಅವತಾರ. ಇದು ಐತರೇಯ ಅವತಾರ. ನಾರದನಿಗೆ ಉಪದೇಶ ಮಾಡಿದ ಅವತಾರ. ಉಪನಿಷತ್ ಕೊಟ್ಟ ಅವತಾರ. ವ್ಯವತ್ಸರ ಸಂವತ್ಸರದಲ್ಲಿ ರಾಜರಾಜೇಶ್ವರ ರೂಪದಿಂದ ಆವೇಶ. ಸತ್ಯ, ಧರ್ಮಗಳನ್ನು ಉಳಿಸುವಿದಕ್ಕೆ ಬಂದ ಆವೇಶ.
ದುಷ್ಟ ಕ್ಷತ್ರಿಯರ ಸಂಹಾರಕ್ಕೆ ಪರುಶರಾಮನ ಅವತಾರ. ಜನರನ್ನು ಎಕ್ಸಪ್ಲಾಯ್ಟ್ ಮಾಡುತ್ತಿದ್ದ, ಸಮಾಜ ಕಂಠಕರಾಗಿದ್ದ ಕ್ಷತ್ರಿಯರನ್ನು ಜಮದಗ್ನಿಯ ಮಗನಾಗಿ ಪರುಶರಾಮ ಅವತಾರದಿಂದ ಭಗವಂತ ಒಂದು
ಕೊಡಲಿಯಲ್ಲಿ ೨೧ ಬಾರಿ ಸುತ್ತಿ ಅಂತಾ ಕ್ಷತ್ರಿಯರನ್ನು
ಸದೆಬಡಿದ. ಸಮುದ್ರದಲ್ಲಿ ಧನ್ವಂತರಿ, ಮೋಹಿನಿ ಅವತಾರ. (೫ ಅವತಾರ ಡಿವ್ಯನ್,
೫ ಅವತಾರ ಫಿಸಿಕಲ್ ಇನ್ಕಾರ್ನೇಷನ್)
ಸೂರ್ಯವಂಶದಲ್ಲಿ ರಾಮಚಂದ್ರನ ಅವತಾರ. ಸಮುದ್ರದ ಅಭಿಮಾನಿ ದೇವತೆ ವರುಣ ದೇವತೆಯ ಸಹಾಯದಿಂದ ಸೇತುವೆ
ಕಟ್ಟಿ ಲಂಕೆಗೆ ಹೊಗಿದ್ದು. ರಾಮಚಂದ್ರ ಸೀತೆಯನ್ನು
ಪಡೆದ. ಅಯೋಧ್ಯೆಗೆ ಬಂದ. ಸೀತೆ ಪತ್ತೆಗೆ ವಿನಿಯಮೂರ್ತಿ ಹನುಮಂತ (ಆಂಜನೇಯ) ಕಾರಣ.
ಯಾದವ ವಂಶದಲ್ಲಿ ಕೃಷ್ಣ ಬಂದ. ಸಾಮನ್ಯ ಜನರಿಗೆ ಕೃಷ್ಣ ಪುಂಡ. ವಿಶ್ವದ ದೃಷ್ಟಿ ಕೋಣದಿಂದ ಲೋಕದ ಅಭಿವ್ಯಕ್ತಿ. ಅದ್ಭುತ ಆದರ್ಶ.
ಹೃದಯದ ಭಕ್ತಿ ಬೆಣ್ಣೆ. ಕೃಷ್ಣ ಪುಟ್ಟ ಕೂಸಾಗಿದ್ದಾಗ
ರಾಕ್ಷಸಿ ಪೂತನಿಯನ್ನು ಕೊಂದು ಹಾಕಿದ. ಕೃಷ್ಣ ೩ ತಿಂಗಳು ಮಗು. ಗಾಡಿಯಲ್ಲಿ ಹಾಲು, ಮೊಸರು ತುಂಬಿದೆ. ಮಗು ಅಳುತ್ತಾ ಗಾಡಿಯನ್ನು ಜಾಡಿಸಿತು. ಅಸುರ ಅಸುವನ್ನು ನೀಗಿದ. ಗಾಡಿ ಬಿದ್ದಿತು. ೩ ವರ್ಷ ಆದಾಗ ಎರಡುಹೆಮ್ಮರಗಳ ಮಧ್ಯದಲ್ಲಿ ಹೋಗಿ ಎಳೆದ. ಮರ ಮುರಿದು ಬಿತ್ತು. ಎರಡು ದೇವತಾ ರತ್ನಗಳು ಮರವಾಗಿದ್ದ ಶಾಪವನ್ನು ಬಿಡಿಸಿದ. ಇದು ಅದ್ಭುತ ಲೀಲೆಗಳು ಕೃಷ್ಣನದು. ಗೋಪ ಬಾಲಕರ ಜೊತೆ ಕೃಷ್ಣ ಕಾಡಿಗೆ ಹೋದ. ಗೋವುಗಳ ರಕ್ಷಣೆ
ಅಂದರೆ ಭೂಮಿ ರಕ್ಷಣೆ. ಯಮುನಾ ನದಿಯ ತೀರದಲ್ಲಿ ಒಂದು
ದೊಡ್ಡ ಮರ. ಅಲ್ಲಿ ಒಂದು ವಿಶ ಸರ್ಪ ಇತ್ತು. ವಿಷ
ತುಂಬಿದ ನೀರನ್ನ್ನು ಕುಡಿದು ಗೋಪಾಲಕರು, ಗೋವುಗಳು ಸತ್ತುಬಿದ್ದವು. ಕೃಷ್ಣ ಕಣ್ಣಿನ ದೃಷ್ಟಿ ಇಂದ ಸತ್ತವರನ್ನು ಎಬ್ಬಿಸಿದ.. ಮೇಲೆ ಮರ ಹತ್ತಿ
ಕೆಳಗೆ ಬಿದ್ದ ಕಾಳಿಂಗಗೆ ಮೇಳಿನಿಂದ ಅದಕ್ಕೆ
ಆಜ್ಞೆಮಾಡಿ ಅದನ್ನು ಅಲ್ಲಿಂದ ಓಡಿಸಿದ. ಇದರ ಸಂಕೇತ
ನಮ್ಮ ಒಳಗಿರುವ ಹಾವಿನ ಕುಂಡಲ ಹೊರಟು ಕೃಷ್ಣ ನಮ್ಮ ಅಂತರಂಗದಲ್ಲಿ ಕುಣಿಯಬೇಕು.
ಕಾಡಿನಲ್ಲಿ ಕ್ಯಾಂಪ್ ಮಾಡಿದ್ದಾಗ ಗೋಪಾಲಕರ ಸುತ್ತ ಕಾಡುಗಿಚ್ಚು ಹಬ್ಬತ್ತೆ. ಎಲ್ಲರೂ ಅಜ್ಞಾನದಿಂದ ಮಲಗಿದ್ದಾರೆ. ಬಲರಾಮನು ಇದ್ದಾನೆ. ಕಣ್ಣು ಮುಚ್ಚಿ ಕೂತಿಕೊಳ್ಳಿ ಅಂತ ಕೃಷ್ಣ ಹೇಳುತ್ತಾನೆ. ಕೃಷ್ಣ ಬಾಯಿ ತೆಗೆದು ಬೆಂಕಿಯನ್ನೆಲ್ಲಾ ಅವನ ಬಾಯಿಯಲ್ಲಿ
ಹೋಗಿಸುತ್ತಾನೆ. ಸೃಷ್ಟಿ ಕಾಲದ ರಹಸ್ಯವನ್ನು ಕೃಷ್ಣ
ತೋರಿಸಿದ. ಕೃಷ್ಣ ೫ ವರ್ಷ ಹುಡುಗನಾಗಿದ್ದಾಗ ಗಡಿಗೆ
ಒಡೆದು ಬೆಣ್ಣೆ ಕದಿಯಲು,ತಾಯಿ ಯಶೋದೆಗೆ ಸಿಟ್ಟುಬಂದು ಎಷ್ಟು ಹಗ್ಗ ತಂದರು
ಕೃಷ್ಣನ ಸೊಂಟವನ್ನು ಕಟ್ಟುವಿದಕ್ಕೆ ಆಗೊದಿಲ್ಲ..
ಇದು ಡಿವ್ಯನ್ ಮಿರೇಕ್ಲ್. ಅದಕ್ಕೆ ಅವನಿಗೆ
ದಾಮೋದರ ಅಂತ ಹೆಸರು ಬಂದಿದ್ದು. ಮಗು ಹಾಲು ಕುಡಿಯುತ್ತಿರುವಾಗ ಬಾಯಿ ಆಕಳಿಸಿ ಇಡಿ ವಿಶ್ವವನ್ನೆ ತೋರಿಸಿದ. ಅದಕ್ಕೆ ವಿಶ್ವಂಭರ ಅಂತ ಹೆಸರು ಬಂತು. ಮಣ್ಣು ತಿಂದು
ಮತ್ತೆ ಬಾಯಿ ತೆರೆದು ಪ್ರಪಂಚವನ್ನು ತೋರಿಸಿದ. ಇದೆರಡು ಅಧ್ಬುತ ಲೀಲೆಗಳು. (ಅನಂತತ್ವ, ವಿಶ್ವಗರ್ಭ). ಅನಂತ - ದೇಶದಿಂದ ಅನಂತ, ಕಾಲದಿಂದ
ಅನಂತ, ಗುಣಗಳಿಂದ ಅನಂತ.
ದಿವ್ಯ ಶಕ್ತಿಯನ್ನು ಪರಿಚಯ ಮಾಡಿಕೊಟ್ಟ.
ಗೋಪ ಬಾಲಕರು ವ್ಯಕುಂಠವನ್ನು ನೋಡಬೇಕೆಂದಾಗ ಕಣ್ಣು ಮುಚ್ಚಿ ಕಣ್ಣು ತೆಗೆದು ನೋಡಿ ಅಂದು ವ್ಯಕುಂಠವನ್ನು ತೋರಿಸಿದ. ವಿಚಿತ್ರ ಲೀಲೆಗಳು. ಅಜ್ಞಾನದಲ್ಲಿ ಮುಳುಗಿರುವ ಮಕ್ಕಳಿಗೆ ದಿವ್ಯ ಲೋಕದ ಅನುಭವ. ಗೋಪಲಕರು ಇಂದ್ರನನ್ನು ಪೂಜೆ ಮಾಡುತ್ತಿದ್ದರು. ಕೃಷ್ಣನಿಗೆ ೭ ವರ್ಷ. ಕೃಷ್ಣ ಗೋವರ್ದನ ಬೆಟ್ಟಕ್ಕೆ ಪೂಜೆ ಮಾಡಿ ಅಂದ. ಇಂದ್ರನಿಗೆ ಪೂಜೆ ಮಾಡಬೇಡಿ ಅಂದ. ಬೆಟ್ಟ ಪೂಜೆ, ಗೋವು ಪೂಜೆ ಪದ್ದತಿ,
ಗೋ ಮಾತೆ ಕಲ್ಪನೆ ಇವೆಲ್ಲವು ಕೃಶ್ಣನಿಂದ ಪ್ರಾಂಭವಾಗಿದ್ದು. ಇಂದ್ರನಿಗೆ ಸಿಟ್ಟು ಬಂತಂತೆ. ಮಳೆ ಸುರಿಸಿದ.
ಧಾರಾಕಾರವಾಗಿ ಏಳು ದಿನ ಮಳೆ ಬಂತು. ಕೃಷ್ಣ
ಒಂದು ಕೈಯಲ್ಲಿ ೭ ದಿವಸ ಬೆಟ್ಟವನ್ನು ಎತ್ತಿದ. ಗೋಪಾಲಕರು
೭ ದಿವಸ ಸುಖವಾಗಿ ವಾಸಮಾಡಿದರು. ಕಿಷ್ಣನ ಮಹಿಮೆ ತೋರಿಸಿದ. ಇಂದ್ರ ಶರಣಾದ. ಕ್ಷಮೆ ಕೇಳಿದ. ಕೃಷ್ಣನಿಗೆ ಗೋವಿಂದ ಅಂತ ಹೆಸರು. ಗೋವುಗಳು ಬಂದು, ಕಾಮದೇನು ಬಂದು
ಅಭಿಶೇಕ ಮಾಡಿತಂತೆ. ಅದರಿಂದ ಗೋವಿಂದ ಅಂತ ಹೆಸರು
ಬಂತು. ೭ ವರ್ಷ ಮಗು ಆಗಿದ್ದಾಗ ರಸಕ್ರೀಡೆ ಆಡಿದ. ೭ ವರ್ಷದಲ್ಲಿ ಎಷ್ಟೆಲ್ಲ ಮಾಡಿದ. ಕೃಷ್ಣ ೭-೮ ವರ್ಷದ ಹುಡುಗನಾಗಿದ್ದಾಗ ಗೋಪಿಕ ಸ್ತ್ರೀಯರ
ಜೊತೆ ವಿಹರಿಸಿದ. ಕಾಮಕತೆಯ ಸ್ಪರ್ಶವೆ ಇರಲಿಲ್ಲ. ಹಗಲೆಲ್ಲ ಗೋವು ಮೇಯಿಸುತಿದ್ದ, ಸಾಯಂಕಾಲ ವೃಂದಾವನಕ್ಕೆ ಬರುತ್ತಿದ್ದ. ಹುಣ್ಣಿಮೆಯ
ರಾತ್ರಿಯಲ್ಲಿ ಯಮುನ ನದಿಯ ಹತ್ತಿರ ಮರಗಳ ಮೇಲೆ ತಂಪಾದ ಬೆಳದಿಂಗಳಲ್ಲಿ ಇವನು ಒಬ್ಬನೆ ಕೊಳಲು ಊದುತ್ತಾ ಕುಳಿತುಬಿಡುತ್ತಿದ್ದ. ಆ ಸಂಗೀತ ಕೇಳಿ ಹೆಣ್ಣು ಮಕ್ಕಳು ಓಡುತ್ತಾರೆ, ಈ ನಾದಕ್ಕೆ ಮೈ ಮರೆತು ಗೋಪಿಕ ಸ್ತ್ರೀಯರು ಆ ನಾದಕ್ಕೆ ಸರಿಯಾಗಿ ಕುಣಿಯುತ್ತಾರೆ. ಪಶು, ಪಕ್ಷಿಗಳು ಮೋಹಗೊಂಡವು. ಕೃಷ್ಣ ಆನಂದಕೊಡುವುದಕ್ಕೆ ಭೂಮಿಗೆ ಇಳಿದು ಬಂದ. ಇದು ಕೃಷ್ಣನ
ಬಾಲ್ಯ ಲೀಲೆಗಳು. ದೃಷ್ಟ ಸಂಹಾರ , ಲೋಕ ಕಂಟಕರನ್ನು ಸಂಹಾರ ಮಾಡಿದ ಕೃಷ್ಣ ಅವತಾರದಲ್ಲಿ ಒಬ್ಬನೆ ನಿಂತು ವಿಶ್ವ ಕಲ್ಯಾಣಕ್ಕಾಗಿ. ಬಕಾಸುರ, ಕಂಸ ಅಂತ ರಾಕ್ಷಸರನ್ನು
ಸಂಹಾರ ಮಾಡಿದ ನರಕಾಸುರನಿಂದ ೧೬,೧೦೦ ಹೆಣ್ಣುಮಕ್ಕಳನ್ನು ಸೆರೆ ಬಿಡಿಸಿದ. ಮದುವೆ ಮಾಡಿಕೊಂದ ಅವರಿಗೆ ಮರಳಿ ಜೀವನ ಕೊಡುವುದಕ್ಕೋಸ್ಕರ. ಪೌಂಡ್ರ ವಾಸುದೇವ ಯುದ್ದಕ್ಕೆ ಬಂದು ಸತ್ತ. ಶಿಶುಪಾಲನನ್ನು
ಕೊಂದು ರುಕ್ಮಿಣಿಯನ್ನು ವಿವಾಹವಾದ. ಸೂತ್ರದಾರನಾಗಿ
ನಿಂತ ಕೃಷ್ಣ ಯುದ್ದದಲ್ಲಿ. ೫೦ ಲಕ್ಷ ಜನರನ್ನು ಆಯುಧ
ಇಲ್ಲದೆ ಕೊಂದ ಕೃಷ್ಣ. ಬೇರೆ ಬೇರೆ ವೀರರ ಒಳಗೆ ಕುಳಿತು ಎಲ್ಲರನ್ನು ಸಂಹಾರ ಮಾಡಿದ. ಒಂದು ಕ್ಷತ್ರಿಯರ ದೇಶಕ್ಕೆ ಹಿತರಾದ ಪಾಂಡವರಿಗೆ ಅಧಿಕಾರ
ಕೊಟ್ಟ. ಧಾರ್ಮಿಕ ಪರಂಪರೆ ಬೆಳಿಸಿದ. ಮಹಾಭಾಅತ ಯುದ್ಧದಲ್ಲಿ ೭೦ ವರ್ಷ ಆಗಿತ್ತು ಕೃಷ್ಣನಿಗೆ. ಕಲಿಯುಗ ೪,೭೨,೦೦೦ ವರ್ಷವಿರುತ್ತೆ. ಈಗ ೫,೦೦೦ ವರ್ಷ ಆಗಿದೆ. ಕಲಿಯುಗದಲ್ಲಿ ನಾಸ್ತಿಕರೆ
ತುಂಬಿದ್ದಾರೆ ಸಮಾಜದಲ್ಲಿ. ದೇವರನ್ನು ನಂಬುವುದಿಲ್ಲ. ದೇವರು ಬಯಸುವದು
ಭಗವಂತನನ್ನು ಆರಾಧಿಸೋದು. ಈ ಯುಗದ ಕೊನೆಯಲ್ಲಿ ಕಲ್ಕಿಯಾಗಿ
ಬರುತ್ತಾನೆ.
ಸೃಷ್ಟಿ ಹೇಗೆ ಆಯಿತು?
ಅದರ ಪ್ರೊಸೆಸ್ಸ್ ಹೇಗೆ ಆಯಿತು?
ಚತುರ್ಮುಖ ಸೃಷ್ಟಿ. ನಾಭಿಯಲ್ಲಿ ಒಂದು ಕಮಲ - ಬ್ರಹ್ಮಾಂಡ. ಪ್ರಳಯ ಕಾಲದಲ್ಲಿ ವಿಶ್ವ ಸೂಕ್ಷ್ಮರೂಪ ಆಗಿತ್ತು. ಆ ಕಮಲದಲ್ಲಿ ಒಂದು ದುಂಬಿ ಕೂತಿತ್ತು. ಮೊದಲ ಜೀವನಿಗೆ ತಿಳಿಸಿದ ಮಾತು. ೧೬ನೆ ಅಕ್ಷರ ಮತ್ತು ೨೧ನೆ ಅಕ್ಷರ - ತಪ - ಯೊಚನೆ ಮಾಡು. ತಿಳಿಯಬೇಕಾದರೆ ತಪಸ್ಸು ಮಾಡು. ನಿರಂತರ ಚಿಂತನೆ ಮಾಡು. ತಪ ಅಂದರೆ ಥಿಂಕ್ ಅಂತ. ತಪ ಇಲ್ಲದಿದ್ದರೆ ಪತ. ಚತುರ್ಮುಖ ಯೋಚನೆ ಮಾಡಿದಾಗ ಭಗವಂತ ಕಣ್ಣು ಮುಂದೆ ನಿಂತುಬಿಟ್ಟ. ಆಗ ಚತುರ್ಮುಖ ನನಗೆ ನಿನ್ನ ಅರಿವು ಕೊಡು ಎಂದು ಹೇಳಿದ. ಆಗ ಅದ್ಯಾತ್ಮದ ರಹಸ್ಯ ಕೊಟ್ಟ ಭಗವಂತ. ದೇವರು ಅಂದರೆ ಯಾವುದು ಇಲ್ಲದಿದ್ದಾಗ ಇರುವದು. ಪಂಚ ಮಹಾಸೂತ್ರಗಳು. ಪಂಚ ಭೂತಗಳು ಇವೆ. ಅದೆ ದೇವರು.
ವಿಧುರ ಗಂಗತೀರಕ್ಕೆ ಬರುತ್ತಾನೆ. ಪಾಂಡವರಿಗೆ ಗಂಗಾ ವಾಸ ಸ್ಥಾನ. ಯಾದವರಿಗೆ ಯಮುನಾ ವಾಸ ಸ್ಥಾನ. ಮೈತ್ರೇಯ ಋಷಿಗಳು ಗಂಗಾತೀರದಲ್ಲಿ ಕುಳಿತಿರುತ್ತಾರೆ. ವಿಧುರನಲ್ಲಿ ಕೃಷ್ಣನ ಚಿಂತೆ ತುಂಬಿರುತ್ತೆ. ವಿಧುರ ಮೈತ್ರೇಯರನ್ನು ನಿಜವಾದ ಸುಖದ ದಾರಿ ಯಾವುದು ಅಂತ ಕೇಳುತ್ತಾನೆ. ಸಾದಾ ತೃಪ್ತಿ, ನೆಮ್ಮದಿ ಯಿಂದ ಬದುಕವದು
ನಿಜವಾದ ಸುಖದ ದಾರಿ ಅಂತ ಮೈತ್ರೇಯರು ಹೇಳುತ್ತಾರೆ.
ಆದರೆ ದುಡ್ಡಿನ ಮೂಲಕ ಸುಖ ಬಯಸುವದು ಜಗತ್ತು.
ವಿಧುರ: ವಿಶ್ವ ಹೇಗೆ ನಿರ್ನಾಮವಾಯಿತು?
ಮೈತ್ರೇಯರು: ಸೃಷ್ಟಿ ಏಕರೂಪವಾಗಿದೆ. ಎಲ್ಲಾ ಕಾಲದಲ್ಲೂ ಪ್ರಪಂಚವಿತ್ತು. ಇಡೀ ಬ್ರಹ್ಮಾಂಡ ಹುಟ್ಟತ್ತೆ ಸಾಯುತ್ತೆ. ಇದು ನಿರಂತರ ಕ್ರಿಯೆ. ೧ ಕಲ್ಪಕ್ಕೆ ೪೩೨ ಕೋಟಿ ವರ್ಷ. ಕ್ರಿಯೇಶನ್ ಓವೆರನೈಟ್ ಆಗಲಿಲ್ಲ. ಇದಕ್ಕೆ ಸೂತ್ರದಾರ ಗಾಡ್. ಸೃಷ್ಟಿಯಲ್ಲಿ ೯ ಹಂತಗಳು ಇದೆ. ೯ನೆ ಹಂತದಲ್ಲಿ ಮನುಷ್ಯನ ಸೃಷ್ಟಿಯಾಯಿತು. ಮೊದಲು ಏನು ಇರಲಿಲ್ಲ. ಕಣ್ಣಿಗೆ ಕಾಣುವ ವಸ್ತು ಪಂಚ ಭೂತವಿರಲಿಲ್ಲ. ವೇದಕಾಲದಲ್ಲಿ ಋಷಿಗಳು ಹೇಳಿದ್ದರು ಆಕಾಶದಲ್ಲಿ
ಅಲ್ಟ್ರಾ ವ್ಯಲೆಟ್ ರೇಸ್ ತುಂಬಿತ್ತು.
ನೀಲವರ್ಣ ಸೃಷ್ಟಿಆಯಿತು ಆಕಾಶದಲ್ಲಿ. ಪರಮಾಣುಗಳು
ಇದ್ದವು. ಭೂಮಿ ಇರಲಿಲ್ಲ. ರಾ ಮೆಟೀರಿಯಲ್ಸ್ ಇತ್ತು. ಜೀವರು ಎಲ್ಲರೂ ಇದ್ದರೂ ಜ್ಞಾನವಿರಲಿಲ್ಲ. ಎನೆರ್ಜಿ ವ್ಯಬ್ರೇಷನ್ ಸ್ಟಾರ್ಟ್ ಆಯಿತು. ಆಕಾಶದಲ್ಲಿ ನ್ಯಟ್ರೇಟ್ ಇಂದ ಗಾಳಿ ಫ಼ಾರ್ಮ್ ಆಯಿತು. ದೇವರು ಮಳಗಿದ್ದನು. ಹೊಕ್ಕಳಿನಿಂದ ಹುಟ್ಟಿದ ಬ್ರಹ್ಮ. ೪೩೨ ಕೋಟಿ ವರ್ಷ ೧ ರಾತ್ರಿ ಬ್ರಹ್ಮನಿಗೆ. ಭಗವಂತನ ಹೊಕ್ಕಳಲ್ಲಿ ಕಮಲ ಹುಟ್ಟಿತು. ಚತುರ್ಮುಖ ಕಣ್ಣು ತೆರೆದಾಗ ಜೀವಗಳಲ್ಲಿ ಅವೇರ್ನೆಸ್ಸ್ ಆಫ಼್ ಎಗ್ಸಿಸ್ಟೆನ್ಸ್ ಅರಿವಾಯಿತು. ಜಗತ್ತಿನ ಮೊದಲ ಜೀವ ಚತುರ್ಮುಖ. ಮಹಾತತ್ವ ಅಂದರೆ ಚಿತ್ತ. ನೆನಪಿನ ಎಚ್ಚರವಾಯಿತು. ಮಹಾತತ್ವ ಫ಼ರ್ಸ್ಟ್ ಸ್ಟೇಜ್. ಸೆಕ್ಂದ್ ಸ್ಟೇಜ್ ಅಹಂಕಾರ ತತ್ವದ ಸೃಷ್ಟಿ. ಅವೇರ್ನೆಸ್ಸ್ ಆಫ಼್ ದಿ ಸೆಲ್ಫ಼್. ಇವೆಲ್ಲಾ ಮೆಂಟಲ್ ಸ್ಟೇಜ್.
ಆಕಾಶದಿಂದ ಗಾಳಿ. ಗಾಳಿ ಇಂದ ಬೆಂಕಿ. ಬೆಂಕಿ ಶಾಕದಿಂದ ನೀರು. ನೀರು ಗಟ್ಟಿ ಆಗಿ ಕಲ್ಲು, ವಾಣಿಜ್ಯ, ಐಸ್ ಆಯಿತು. ನೀರಿನಿಂದ ಮಣ್ಣು ಸೃಷ್ಟಿ ಆಯಿತು. ಇಂದ್ರಿಯಗಳು ಸೃಷ್ಟಿ ಆಯಿತು. ಅಹಂಕಾರ ಶಿವ ಬಂದ. ೩ ಬಗೆಯ ೩ ಕಣ್ಣುಗಳು ಎಲ್ಲರಿಗೂ ಇದೆ. ೩ ಗುಣಗಳು ಇದೆ. ಅದು ಸಾತ್ವೀಕ್, ರಜಸ್,
ತಮಸ್. ಶಿವನಿಂದ ಗಣಪತಿ ಸೃಷ್ಟಿಆದ. ಆಕಾಶ - ವಾಯು - ಅಗ್ನಿ - ಜಲ - ಪೃಥ್ವಿ - ಇವು ಪಂಚಭೂತಗಳು. ಆಕಾಶದ ಜೊತೆ ಶಬ್ದ(ನಾದ) ಸೃಷ್ಟಿ ವಾಯುವಿಂದ ಗಾಳಿ. ಸದ್ದು ಕಿವಿಗೆ, ಗಾಳಿ ಬೀಸಿದ್ದು
ಸ್ಪರ್ಶ. ಕಿಡಿ ಚಿಮ್ಮಿ ಬೆಂಕಿ ಹುಟ್ಟಿತು. ರೂಪ ಬಂತು.
ಕಣ್ಣಿಗೆ ಕಾಣುವ ರೂಪ ಬಂತು. ಬೆಂಕಿ ಇಂದ
ಶಬ್ದ ಇದೆ. ನೀರಿನಲ್ಲಿ ಶಬ್ದ ಇದೆ. ನೀರು ಮುಟ್ಟಿದಾಗ ಆನಂದವಾಗುತ್ತೆ. ಶಬ್ದ, ಸ್ಪರ್ಷ, ರೂಪ, ರುಚಿ. ನೀರು
ಗಟ್ಟಿ ಆಗಿ ಮಣ್ಣಾಯಿತು. ಮಣ್ಣಿನ ವಾಸನೆ ಬಂತು.
ಜ್ಞಾನೇಂದಿಯಗಳು - ಕಣ್ಣು, ಕಿವಿ, ಮೂಗು,
ನಾಲಿಗೆ, ತೊಗಳು.
ಕರ್ಮೇಂದ್ರಿಯಗಳು - ಕೈ, ಬಾಯಿ, ಕಾಲು, ಮಲಮೂತ್ರಗಳು.
೩ನೆ ಹಂತ ಪಂಚಭೂತಗಳು. ೪ನೆ ಹಂತ ಇಂದ್ರಿಯ
ಸೃಷ್ಟಿ.
ಆಕಾಶ - ಶಬ್ದ - ಕಿವಿ. ಅತ್ಯಂತ ಅದ್ಭುತ ಇಂದ್ರಿಯ.
ಗಾಳಿ - ಗಾಳಿ ಬೀಸಿತು -ಗಾಳಿ ಇಂದ ಸ್ಪರ್ಶ
- ಚರ್ಮ. (ಸೆಂಸೇಷನ್).
ಬೆಂಕಿ - ಬೆಂಕಿ ಇಂದ ರೂಪ - ಕಣ್ಣಿನ ಸೃಷ್ಟಿ. ವಿಶ್ವದ ಅದ್ಭುತ ರೂಪ.
ನೀರು - ರಸ ಇಟ್ಟ. ನಾಲಿಗೆ ಕೊಟ್ಟ ರಸವನ್ನು ಸವಿಯುವ ರುಚಿ. ನಾಲಿಗೆ ಸಾವಿರ
ಬಗೆಯ ರುಚಿಗಳನ್ನು ಗ್ರಹಿಸುವದು.
ಭೂಮಿ - ಮಣ್ಣು - ಗಂಧ - ಮೂಗು ಕೊಟ್ಟ. ಜ್ಞಾನೇಂದ್ರಿಯ ಸೃಷ್ಟಿ ಮಾಡಿದ.
ಹಾಡುವ ಬಾಯಿ. ಬಾಯಿ ಇಂದ ಕಿವಿಗೆ ಕಮ್ಯುನಿಕೇಷನ್. ಜ್ಞ್ನಾನೇಂದ್ರಿಯ ಜೊಥೆ ಕರ್ಮೇಂದ್ರಿಯ ಕ್ರಿಯೆ ಭಗವಂತ ಕೊಟ್ಟ. ಬಾಯಿ, ಕೈಗಳನ್ನು ಮನುಷ್ಯನಿಗೆ ಭಗವಂತ
ಕೊಟ್ಟ. ಮನುಷ್ಯನಿಗೆ ಎರಡುಕಾಲು ಕೊಟ್ಟ. ದೇಶದಿಂದ ದೇಶಕ್ಕೆ ಸಂಚರಿಸುತ್ತೇವೆ. ಮನುಷ್ಯನ ಚಟುವಿಟಿಕೆ ಕಾಲು. ದುಡಿಮೆಯ ಸಂಕೇತ. ತಿಂದ ಆಹಾರ ಎಕ್ಸೆಸ್ಸ್ ಆಗಿದ್ದರೆ ಹೊರಗೆ ಹೋಗತ್ತೆ. ಮಲ ಆಗಿ ಮೂತ್ರವಾಗಿ ಹೋಗತ್ತೆ. ಬೇಡವಾದ್ದು ವಿಸರ್ಜನೆ.
೫ನೆ ಸ್ಟೇಜ್ ಇಂದ್ರಿಯಗಳನ್ನು ನಿಯಂತ್ರಿಸುವ
ದೇವತೆಗಳು. ಆಕಾಶಕ್ಕೆ ಗಣಪತಿ, ಬೆಂಕಿಗೆ ಅಗ್ನಿ,
ನೀರಿಗೆ ವರುಣ ಎಟ್ಸೆಟ್ರ, ಇಂದ್ರಿಯಾಭಿಮಾನಿ ದೇವತೆಗಳನ್ನು
ಸೃಷ್ಟಿ ಮಾಡಿದ. ಮನಸ್ಸು ಸೃಷ್ಟಿ ಆಯಿತು. ಇನ್ವಾಲ್ವ್ಮೆಂಟ್ ಆಫ಼್ ಮ್ಯಂಡ್ ಈಸ್ ವೆರಿ ಇಮ್ಪಾರ್ಟೆನ್ಟ್. ಮನಸ್ಸು, ಬುದ್ದಿ ಸೃಷ್ಟಿ ಆಯಿತು. ಮನಸ್ಸಿನ ದೇವತೆ ಶಿವ. ಕಣ್ಣಿನ ದೇವತೆ ಸೂರ್ಯ, ಚಂದ್ರ. ನಾಲಿಗೆ ರುಚಿಗೆ ವರುಣ ದೇವತೆ, ಮೂಗಿಗೆ ಅಶ್ವಿನಿ ದೇವತೆ, ಕಾಲಿಗೆ ಇಂದ್ರನ ಮಗ ಶಂಭು ದೇವತೆ. ಮಲ
ವಿಸರ್ಜನೆ ದೇವತೆ ಯಮ.
೬ನೆ ಸ್ಟೆಜ್ ಅಜ್ಞಾನದ ಪರದೆ ಸೃಷ್ಟಿ ಮಾಡಿದ. ಭಗವಂತನ ಒಂದು ಲೀಲೆ ಇದು.
೭ನೆ ಸ್ಟೆಜ್ ಮೊದಲು ಸೃಷ್ಟಿ ಆಗಿದ್ದು ಪ್ಲೇಂಟ್ಸ್. ನೆಲದ ತುಂಬ ನೀರು ಬಿದ್ದು ಪ್ಲೇನ್ಟ್ಸ್ ಹುಟ್ಟಿದವು. ನಮ್ಮ ಉಸಿರಾಟ ಇರುವದು ಪ್ಲೇನ್ಟ್ಸ್, ಮರಗಳಿಂದ. ಪ್ರಾಣ ಶಕ್ತಿ ಕೊಡುವ ಮರಗಳು ಹುಟ್ಟಿದವು.
೧. ವನಸ್ಪತಿಗಳು - ಹೂ ಬಿಡದೆ ಹಣ್ಣು ಬಿಡುವುದು
- ಅಶ್ವತ್ತ ಮರ.
೨. ಧ್ರಮಹ - ಹೂವು, ಹಣ್ಣು ಬಿಡುವ ಮರಗಳು.
೩. ಔಷದಯ - ಫಲ ಕೊಟ್ಟು ಸಾಯುವದು. ಉದಾ: ಭತ್ತ, ಬಾಳೆಗಿಡ.
೪. ಲತೆಗಳು - ಬಳ್ಳಿಯಾಗಿ ಹರಡುವದು.
೫. ಬುಶಸ್.
೬. ಒಳಗೆ ಟೊಳ್ಳು - ಬಿದುರು, ಬೊಂಬೂ
ಪ್ರಪಂಚದಲ್ಲಿ ಹೀಗೆ ಕಾಡು ತುಂಬಿದವು. ಪ್ರಪಂಚದಲ್ಲಿ
೬ ತರಹ ಮರಗಳು ಇರುವದು.
ಮುಖ್ಯ ಸೃಶ್ಟಿ ಮರಗಳು. ಮೇಲಕ್ಕೆ ಹೋಗುವ ಗತಿ ಇರುವದು. ಮರಗಳು ಮೇಲೆ ಮುಖ ಬೆಳವಣಿಗೆ. ನೀರು ಬುಡಕ್ಕೆ ಹಾಕುವದು. ಬೇರಿನಿಂದ ಎಳದುಕೊಳ್ಳತ್ತೆ. ಆಹಾರದ ಗತಿ ಅಪ್ವರ್ಡ್ ಮೂವ್ಮೆನ್ಟ್. ಪ್ರಾಣಿಗಳಿಗೆ ಆಹಾರ ಬಾಯಿಯಿಂದ ಹೋಗುತ್ತೆ. ಮನುಷ್ಯನಿಗೆ ತಿನ್ನುವುದು ಕೆಳಗೆ ಹೋಗುತ್ತೆ. ಇದು ಬ್ಯುಟಿಫ಼ುಲ್
ಕಾನ್ಸೆಪ್ಟ್. ಎವಲೂಶನ್ : ಮರಗಳೂ ಕೆಳಗಡೆ ಇದೆ. ಮನುಷ್ಯ ಜ಼ೆನಿತ್ನಲ್ಲಿ ಇದ್ದಾನೆ. ಮರಗಳು ಅದೋಗತಿಗೆ ಹೋಗುವುದಿಲ್ಲ. ಸೃಷ್ಟಿ ಒಳಗೂ ಮೇಲೆ ಹೋಗುತ್ತೆ. ಮನುಷ್ಯರಿಗೆ ೬ ೧/೨ ಅಡಿ. ಮರಗಳು ಎತ್ತರಕ್ಕೆ ಏರುತ್ತದೆ. ಪ್ಲೇಂಟ್ಸ್ ಹೇವ್ ಲ್ಯಫ಼್. ಬದುಕು ಕತ್ತಲೆ.
ಅರಿವಿದೆ, ಚೈತನ್ಯವಿದೆ. ಕತ್ತಿಲು ತುಂಬಿದ
ಬದುಕು. ನೋವು ನಳಿವಿನ ಫ಼ೀಲಿಂಗ್ ಮರಗಳಿಗೂ,
ಪ್ರಾಣಿಗಳಿಗು ಇದೆ. ಇದು ಪ್ರಾಚೀನ
ಕಲ್ಪನೆ. ಸುಖದುಃಖಗಳಿಗೆ ಸ್ಪಂದಿಸುವ ಶಕ್ತಿ ಮರಗಳಿಗಿದೆ. ೭ನೆಯ ಮೆಟ್ಟಲು ಮರಗಳು. ಒಂದು ದೊಡ್ಡ ಗುಣ ಮರಗಳಲ್ಲಿ ಇದೆ. ಬದುಕಿದಾಗ
ಉಪಕಾರ ಮಾಡುವುದು. ನರಳಿನಲ್ಲಿ ನಿಂತರೆ ಬಿಸಿಲಿನ
ತಾಪದಿಂದ ರಕ್ಷಣೆ. ಸಾವಿರಾರು ಪಕ್ಷಿಗಳಿಗೆ ರಕ್ಷಣೆ. ಪಕ್ಷಿಗಳಿಗೆ ಆಹಾರ. ಒಳ್ಳೆ ಹಣ್ಣು ಕೊಟ್ಟು ರಕ್ಷಿಸುವದು. ಅಪಕಾರ ಮಾಡಿದರೂ ಉಪಕಾರ. ಮರ ಸತ್ತರೆ ಕೊಳಕಾಗುವುದಿಲ್ಲ. ಒಣಗತ್ತೆ.
ಕಟ್ಟಿಗೆ ಆಗುತ್ತೆ. ಅದು ಫ಼ೂಯೆಲ್ಲಾಗಿ ಆಹಾರ
ಒದಗಿಸತ್ತೆ. ಇದು ಬಹಳ ಮುಖ್ಯವಾದ ಸೃಷ್ಟಿ.
೮ನೆ ಸೃಷ್ಟಿ ಪಕ್ಷಿಗಳು, ಪ್ರಾಣಿಗಳು, ಮೀನುಗಳು, ನಾಲ್ಕು ಕಾಲು ಪ್ರಾಣಿಗಳು ಸೃಷ್ಟಿ ಆದವು. ೨೮ ತರಹ ಪ್ರಾಣಿಗಳು ಯಜ್ಞ, ಯಾಗಾದಿಗಳಲ್ಲಿ ಉಪಯೋಗವಾಗಿದೆ. ನಾಡಿನಲ್ಲಿರುವ
ಪ್ರಾಣಿಗಳು, ಆಕಾಶದಲ್ಲಿರುವ ಪ್ರಾಣಿಗಳು, ನೀರಿನಲ್ಲಿರುವ
ಪ್ರಾಣಿಗಳು ಸೃಷ್ಟಿ ಆಯಿತು. ಏನು ಅರಿವು ಇಲ್ಲ. ಮರಗಳ ಹಾಗೆ ಕತ್ತಲು ಕವಿದ ಬದುಕು. ಮುಂದಿನ ಯೋಚನೆ ಇಲ್ಲ. ನಾಳಿನ ಯೋಚನೆ ಇಲ್ಲ. ಒಂದು ವಿಶೇಷ - ಮೂಗು ಸೂಕ್ಷ್ಮ. ನಮ್ಮ ಕಣ್ಣಿನ ಕಾರ್ಯವನ್ನು ಮೂಗು ಮಾಡುತ್ತೆ. ಮೂಗಿನ ಅರಿವಿನಲ್ಲಿ ಮನುಷ್ಯನಿಗಿಂತ ಮುಂದೆ.
೯ನೆ ಮೆಟ್ಟಲು ಮನುಷ್ಯ.
ಪ್ರಾಣಿಗಳು ಸೃಷ್ಟಿ ಆಯಿತು. ಕಪಿ ಸೃಷ್ಟಿ ಆಯಿತು. ಆಮೇಲೆ ಮನುಷ್ಯ ಆದ. ಮಾಡರ್ನ್ ಸ್ಯನ್ಟಿಸ್ಟ್ ಇದನ್ನು
ಒಪ್ಪುವುದಿಲ್ಲ. ಮಂಗನ್ ಅನಂತರ ಮನುಷ್ಯ ಸೃಷ್ಟಿ
ಆಯಿತು. ಮರಗಳು ಮೇಲೆ ಹೋದರೆ ಮನುಷ್ಯ ಕೆಳಗೆ ಬರುವದು. ಮನುಷ್ಯನಲ್ಲಿ ವಿಭಾಗವಿಲ್ಲ. ಎಲ್ಲಾ ಸೆಲ್ಫ಼್ ಸೆನ್ಟೆರ್ಡ್. ಮನುಷ್ಯ ಸ್ವಾರ್ಥಿ. ಅತ್ಯಂತ ನೀಚವಾದ ಪ್ರಾಣಿ ಮನುಷ್ಯ. ರಜೋ ಗುಣ ಪರ್ಸೆನ್ಟೇಜ್ ಜಾಸ್ತಿ. ತಾನು ಮೇಲೆ ಬರಬೇಕು - ಹಾರಾಟ, ಹೋರಾಟ - ರಜೋ ಗುಣ. ತಿಂದ, ಉಂಡ, ಮಲಗಿದ - ತಾಮಸ ಗುಣ. ವಾಸ್ತವಿಕವಾಗಿ ಸುಖ
ಏನು ಅಂತಾನೆ ಗೊತ್ತಿಲ್ಲ. ಸುಖದ ನಿರೀಕ್ಷೆಯಲ್ಲಿ
ದುಃಖ. ಉದಾ: ಹೆಗಲಲ್ಲಿ ಸಾಮಾನು ಹೊತ್ತ್ಕೊಂಡು ಒಂದು ಹೆಗಳಿನಿಂದ ಇನ್ನೊಂದು ಹೆಗಳಿಗೆ ಟ್ರೇನ್ಸ್ಫ಼ರ್ ಆಗೋದು
- ಹೀಗೆ ದುಃಖದ ಸರಮಾಲೆ. ದುಡ್ಡು ಸುಖವನ್ನು ಕೊಡುವುದಿಲ್ಲ. ಕನ್ಟೆಂಟ್ಮೆಂಟ್ ಇಲ್ಲದೆ ಮನುಷ್ಯ ಒದ್ದಾಡುವನು
ಅತ್ಯಂತ ಸೂಕ್ಷ್ಮವಾದ ವಸ್ತು - ಪರಮಾಣು(ಆಟಮ್). ಅತ್ಯಂತ ಚಿಕ್ಕ ವಸ್ತು ಆಟಮ್ ಅಂತ ಭಾಗವತ ಹೇಳುತ್ತೆ. ಪರಮಾಣು ಒಳಗೆ ಸಬ್ ಆಟಮ್ ಇರುತ್ತೆ. ಅನೇಕ ಅಂಶ(ಸಬ್ ಡಿವಿಜ಼ನ್) ಇರುತ್ತೆ. ಪರಮಾಣು ಕಾಲ ಅತ್ಯಂತ ಸೂಕ್ಷ್ಮ ಕಾಲ. ಸೂರ್ಯ, ಚಂದ್ರ ಸೃಷ್ಟಿ ಕಾಲ ಸೃಷ್ಟಿ
ಆಯಿತು. ಒಂದು ಹಗಲು, ಒಂದು ರಾತ್ರಿ ಕಾಲದ ಡಿವಿಅನ್ ಶುರುವಾಯಿತು.
ಪರಮಾಣು ಕಾಲದಿಂದ ಹಿಡಿದು ಒಂದು ವಿಘಳಿಗೆ ೬೦ ಸೆಕಂಡ್ಸ್). ಘಳಿಗೆ ಅಂದರೆ
೨೪ ನಿಮಿಷ. ೧೫ ದಿನಗಳು ಒಂದು ಪಕ್ಷ. ಶುಕ್ಲ ಪಕ್ಷ/ಕೃಷ್ಣ ಪಕ್ಷ. ೩೦ ದಿನ ೧ ತಿಂಗಳು. ೧೨ ತಿಂಗಳು ೧ ವರ್ಷ(೧ ಸಂವತ್ಸರ) ೧ ವರ್ಷ - ೩೬೫ ದಿವಸ. ಅನುಮತ್ಸ್ರ - ಚಾಂದ್ರ ಮಾನ. ಚಾಂದ್ರ ವರ್ಷ ಚೈತ್ರದಿಂದ ೩೫೫ ದಿನಗಳು. ಚಂದ್ರನಿಗೆ ೧೦ ದಿವಸ ಕಮ್ಮಿ ೧ ವರ್ಷಕ್ಕೆ. ೩ ವರ್ಷಕ್ಕೆ ೧ ಅಧಿಕ ಮಾಸ ಬರುತ್ತೆ ಚಾಂದ್ರಮಾನದಲ್ಲಿ.
ವರಾಹ ತನ್ನ ದಾಡೆಇಂದ ಭೂಮಿಯನ್ನು ಎತ್ತಿ ಹಿಡಿಯುತ್ತಾನೆ.
ಭೂಮಿಯನ್ನು ಒಬ್ಬ ಮುಳಿಗಿಸುತ್ತಾನೆ. ಹೋರಾಟಕ್ಕೆ ಬಂದ ಅವನನ್ನು ವರಾಹ ತನ್ನ ದೊವ್ಡೆಇಂದ
ಕೊಳ್ಳುತ್ತಾನೆ. ಅವನೆ ಹಿರಣ್ಯಾಕ್ಷ. ಒಂದು ದ್ಯೆವೀ
ಶಕ್ತಿ ಇನ್ನೊಂದು ದುಷ್ಟ ಶಕ್ತಿ. ದಿತಿ ಕಾಶ್ಯಪರ
ದಾಂಪತ್ಯದಿಂದ ಇಬ್ಬರು ನೀಚ ಮಕ್ಕಳು ಹುಟ್ಟುತ್ತಾರೆ ಕಾಲ ದೋಷದಿಂದ ಮತ್ತು ವ್ಯಕ್ತಿ ದೋಷದಿಂದ.
ಕಾಲ ದೋಷ - ಸೂರ್ಯ ಮುಳಿಗಿರಲಿಲ್ಲ, ವ್ಯಕ್ತಿ ದೋಷ - ದಿತಿ ಕಶ್ಯಪರನ್ನು
ಬಲವಂತವಾಗಿ ರಮಿಸಿದ್ದರಿಂದ; ಇಬ್ಬರು ನೀಚ ಮಕ್ಕಳು ಹುಟ್ಟುತ್ತಾರೆ ಅಂತ ಕಶ್ಯಪರು ಹೇಳುತ್ತಾರೆ. ದಿತಿಗೆ ಅವಳಿ ಮಕ್ಕಳಾದರು - ಹಿರಣ್ಯಾಕ್ಷ, ಹಿರಣ್ಯಕಶಿಪು. ಸನಕಾದಿಗಳು ಪುಟ್ಟ ಮಕ್ಕಳಂತೆ
ಸೂಕ್ಷ್ಮಲೋಕಕ್ಕೆ ಭಗವಂತನನ್ನು ನೋಡುವುದಕ್ಕೆ ಹೋಗಬೇಕಾದಾಗ ದ್ವಾರಪಾಲಕರು ಅವರನ್ನು ತಡೆಯುತ್ತಾರೆ. ಆಗ ಭಗವಂತನ ಎಚ್ಚರವಿಲ್ಲದ ಜನ್ಮ ಭೂಮಿಯಲ್ಲಿ ಬರಲಿ ಎಂದು
ಸನಕಾದಿಗಳು ದ್ವಾರಪಾಲಕರಿಗೆ ಶಾಪ ಕೊಟ್ಟುಬಿಟ್ಟರು.
ಆಮೇಲೆ ಪಶ್ಚಾತಾಪ ಪಟ್ಟರು. ಭಗವಂತ ಬಂದು
ದರ್ಶನ ಕೊಟ್ಟು ಸನಕಾದಿಗಳನ್ನು ಅವರ ಪರವಾಗಿ ಕ್ಷಮೆ ಕೇಳಿಕೊಂಡ. ನಿಮ್ಮ ಸಿದ್ದಾಂತವೆ ನನ್ನ ಸಿದ್ದಾಂತ ಎಂದು ಸನಕಾದಿಗಳನ್ನು
ಸಂತ್ಯೆಸಿ ನಿಮ್ಮ ಶಾಪವೆ ನನ್ನ ಶಾಪ ಅನ್ನುತಾನೆ ಭಗವಂತಜ್ಣಾನಿಗಳನ್ನು ಇಷ್ಟಪಡುತ್ತಾನೆ ಭಗವಂತ. ಒಂದು
ದೇಹದಲ್ಲಿ ಎರಡು ಜೀವ ಕೊಟ್ಟಿರುತ್ತಾನೆ ಭಗವಂತ. ಸಜ್ಜನಿಕೆ,
ದುಷ್ಟತನ ಎರಡೂ ಇರುತ್ತೆ. ದೇವತೆಗಳು
ಶಾಪಗ್ರಸ್ತರಾಗಿ ಬಂದರು ದಿತಿಗೆ ಅವಳಿಮಕ್ಕಳಾಗಿ. ಅವರೇ ಹಿರಣ್ಯಾಕ್ಷ, ಹಿರಣ್ಯಕಶಿಪು.
ಚತುರ್ಮುಖ ಬ್ರಹ್ಮ ದೇವತಗಳಿಗೆ ಹೇಳುತ್ತಾನೆ ಆಪತ್ತು ಬಂದಾಗ ತಲೆ ಕೆಡಿಸಿಕೊಳ್ಳಬೇಡಿ ಪ್ರಾಬ್ಲಮ್ ಬಂದಾಗ ಶಾಂತವಾಗಿದ್ದರೆ ಪ್ರಾಬ್ಲಮ್ ಸಾಲ್ವ್
ಆಗುತ್ತೆ. ಸಮಸ್ಯೆ ಬಂದಾಗ ಭಗವಂತನಿಗೆ ಶರಣು ಹೋಗು.
ಇದು ಭಗವಂತ ದೇವತೆಗಳಿಗೆ ಹೇಳಿದ ಉಪದೇಶ. ಕಪಿಲ ವಾಸುದೇವನ
ಅಪೂರ್ವ ಸಿದ್ದಾಂತ ಕೊಡುತ್ತಾನೆ. ಸತ್ಯದ ಅರಿವನ್ನು
ಕೊಡು ಅಂತ ತಾಯಿ ಕೇಳುತ್ತಾಳೆ. ಭಗವಂತನ ಎಚ್ಚರವಿರಬೇಕು
ಅಂತ ಹೇಳುತ್ತಾನೆ. ಮೂಲ ಪ್ರಕೃತಿ ವಿಶ್ವವನ್ನು ಸಂಖ್ಯ
ಮೂಲಕ ತಿಳಿಯಬೇಕು ಅಂತ ಹೇಳುತ್ತಾನೆ. ಮಡಕೆಯನ್ನು
ತಯ್ಯಾರು ಮಾಡಿ ಆಕಾರ ಕೊಡುವದು ಕುಂಬಾರ. ಆ ಕುಂಬಾರನೆ ಭಗವಂತ. ಪ್ರಪಂಚ ಅಂದರೆ ೨೪ ಬಗೆಯ ರೂಪಗೊಂಡ ಪ್ರಪಂಚ. ಇದೇ ಸಂಖ್ಯಾ (ನ್ಯುಮರಾಲಜಿ). ಮೊದಲು ೫ ಪಂಚಮಹಾಭೂತ; ೫ - ಆಕಾಶ,
ಪೃಥ್ವಿ, ಅಗ್ನಿ, ಜಲ,
ಗಾಳಿ; ೫ ಗುಣಗಳು - ಶಬ್ದ(ಸೌಂಡ್), ಗಂದ(ಸ್ಮೆಲ್), ರೂಪ(ವಿಜ಼ನ್), ರಸ(ಟೇಸ್ಟ್),
ಸ್ಪರ್ಶ(ಟಚ್). ೧೦ ವಸ್ತುಗಳು -
೫ ಜ್ಞಾನೇಂದ್ರಿಯ, ೫ ಕರ್ಮೇಂದ್ರಿಯಗಳು; ೪ -
ಮನಸ್ಸು, ಬುದ್ದಿ, ಅಹಂಕಾರ, ಚಿತ್ತ(ಮೆಮೊರಿ). ಇಡೀವಿಶ್ವದಲ್ಲಿಇದನ್ನು
ಅನುಭವಿಸುವ ಜೀವ ಇದ್ದಾನೆ. ಅವನೇ ೨೫. ಇದನ್ನು ಅನುಭವಿಸುವ
ಭಗವಂತ ಇದ್ದಾನೆ. ಅವನೇ ೨೬. ವಿಶ್ವವನ್ನು ಮೊದಲು ತಿಳಿ ಅಂತ ತಾಯಿಗೆ ಕಪಿಲ ಹೇಳಿದ. ಆಮೇಲೆ ಭಗವಂತನ ಚಿಂತನೆ ಮಾಡು ಅಂತಾ ಕಪಿಲ ತಾಯಿಗೆ ಹೇಳುತ್ತಾನೆ.
ಕಪಿಲ ವಾಸುದೇವ - ಪತಂಜಲಿಲಿ ಬರೆದಿರುವ ಶಾಸ್ತ್ರ.
ಎಂಟು ಹೆಜ್ಜೆ.
ಮೊದಲನೆಯದು - ನಮ್ಮಪಾಲಿಗೆ ನಮ್ಮ ನಡೆ. ೨. ಸ್ವಧರ್ಮ
- ಅಧ್ಯಯನ. ಆ ಧರ್ಮದಲ್ಲೆ ಪರಮಾತ್ಮನನ್ನು ಕಂಡುಕೊಳ್ಳಬೇಕು.
೩. ದ್ಯೆವ ಲಬ್ಯಆದ್ಯಾತ್ಮ ಬಲ್ಲವರನ್ನು ಸೇವೆ ಮಾಡು. ಸೆಕ್ಸ್ ನಿಯಂತ್ರಣದಲ್ಲಿ ಇಡು. ಮೋಕ್ಷದ ಕಡೆ ಚಿಂತಿಸು. ಪ್ಯೂರ್ ಫ಼ುಡ್ ಎನ್ಡ್ ಲಿಮಿಟೆಡ್ ಫ಼ುಡ್ ತೊಗೊಬೇಕು. ಏಕಾಂತದಲ್ಲಿ ಚಿಂತೆ ಮಾಡು. ಐಹಿಕ ಸುಖದ ಕಡೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡ. ಆದಷ್ಟು ಒಳ್ಳೆ ಜಾಗದಲ್ಲಿ ಒಬ್ಬನೆ ಕೂತು ಚಿಂತನೆ ಮಾಡು. ಅಹಿಂಸಾ - ನಮ್ಮ ತಪಸ್ಸು ಇನ್ನೊಬ್ಬರಿಗೆ ಹಿಂಸೆ ಆಗಬಾರಡು. ಇನ್ನೊಬ್ಬರ ಮುಂದೆ ಕೈ ಒಡ್ಡಬಾರದು. ಬ್ರಹ್ಮಚರ್ಯ ಪಾಲಿಸಬೇಕು. ಅಂದರೆ ಹೆಂಡತಿ ಹತ್ತಿರ ಮಾತ್ರ ಸೆಕ್ಸ್. ಸಾಧನೆ ಬಗ್ಗೆ ದ್ಯೆರ್ಯ. ಉಸಿರಾಟದ ನಿಯಂತ್ರಣ. ಪ್ರತ್ಯಾಹ - ವಿಷಯ ಹತ್ತಿರ ಹೋಗದಂತೆ ಕಿವಿಯ ನಿಯಂತ್ರಣ. ಭಗವಂತನ ಮೇಲೆ ಧ್ಯಾನ. ಭಗವಂತನ ರೂಪವನ್ನು ಮನಸ್ಸಿನಲ್ಲಿ ಮೂಡಿಬರಲಿ. ಅವನ ಪಾದದ ಉಗರಿನಿಂದ ಕೆಂಪು ಬೆಳಕು ಕಾಣಬೇಕು, ಪ್ರಕಾಶ ಚಿಮ್ಮುತ್ತಿರುವ
ಹೃದಯ, ಶಂಖ ಚಕ್ರ. ಮಂದಹಾಸದ ಮೋರೆ, ಅಗಲ ಕಣ್ಣುಗಳು,
ಗುಂಗರು ಕೂದಲುಗಳು. ಇಡೀ ವಿಶ್ವದಲ್ಲಿರುವ
ಭಗವಂತ ನಮ್ಮ ಹೃದಯದಲ್ಲಿ ಇದ್ದಾನೆ - ಹೀಗೆ ಚಿಂತೆ
ಮಾಡಬೇಕು. ಇದು ಕಪಿಲ ವಾಸುದೇವ ತಾಯಿಗೆ ಮಾಡಿದ ಉಪದೇಶ.
ರವಚನಕಾರರು - ಗೊತಿಲ್ಲ - ಅನ್ನೋನ್
ಎ
‘.