ಬ್ರಹ್ಮಸೂತ್ರ ಭಾಷ್ಯದಲ್ಲಿ ಮುಖ್ಯಪ್ರಾಣನ ಮಹಿಮೆ - ಶ್ರೀ ಬಿಂದು ಮಾಧವ ನಾಗಸಂಪಿಗೆ

ಬ್ರಹ್ಮಸೂತ್ರ ಭಾಷ್ಯದಲ್ಲಿ ಮುಖ್ಯಪ್ರಾಣನ ಮಹಿಮೆ  -  ಶ್ರೀ ಬಿಂದು ಮಾಧವ ನಾಗಸಂಪಿಗೆ

 

ಮುಖ್ಯಪ್ರಾಣದೇವರಿಗೆ ಪರಮಾತ್ಮನೆ ಸ್ವಾಮಿ.

ಪ್ರಾಣ - ಮೇಲುಗಡೆ; ಅಪಾನ - ಕೆಳಗಡೆ.  ಮುಖ್ಯಪ್ರಾಣನಿಗೆ ೫ ರೂಪ.

ಪ್ರಾಣನಾಮಕ ಮುಖದ ಭಾಗದಲ್ಲಿ.  ಅಪಾನ ನಾಮಕ ನಾಭಿಯ ಕೆಳಗಡೆ.  ಪ್ರಾಣವನ್ನು ಈಡನಾಡಿ ಅಂತ ಕರೀತಾರೆ.  ಈಡ ಅಂದರೆ ಎಡ.  ಅಪಾನವನ್ನು ಪಿಂಗಲ ನಾಡಿ ಎಂದು ಕರೀತಾರೆ.  ಅಪಾನಾಮಕ ಬಲಭಾಗದಲ್ಲಿದೆ.  ಪ್ರಾಣ ನಾಮಕದಿಂದ ಉಸಿರಾಟ.  ಉಸಿರಾಟದಿಂದ ಚೇಷ್ಟೆ.  ನೀರಿನಭಾಗದ ನಿಯಂತ್ರಣ ಪ್ರಾಣ ನಾಮಕನಂದೆ.  ಅಪಾನ ನಾಮಕ ಬೇಡವಾದ ಕಲ್ಮಷಗಳನ್ನು ಕೆಳಗಡೆ ಹೋಗಿಸುತ್ತದೆ.  ಮಣ್ಣಿನಭಾಗ ನಿಯಂತ್ರಣ ಅಪಾನ ನಾಮಕನದು. ವ್ಯಾನ ನಾಮಕ ರೂಪ ಎಲ್ಲಾಕಡೆಇದೆ.  ಎಲ್ಲಾ ನಾಡಿಯಲ್ಲಿ ಇದೆ.  ಇದು ಹೊರಗಡೆ ವಾಯು, ಒಳಗಡೆ ವ್ಯಾನ.  ಸಮಾನನಾಮಕನಾಗಿ ಆಹಾರವನ್ನು ಎಲ್ಲಕಡೆ ಸಮನಾಗಿಕೊಟ್ಟು ಎಲ್ಲಾ ಇಂದ್ರಿಯಗಳಿಗೆ ಶಕ್ತಿ ಕೊಡುತ್ತದೆ.  ಉದಾನ ನಾಮಕ ಕುತ್ತಿಗೆಯಲ್ಲಿ ಇದ್ದಾನೆ.  ಜೀವನನ್ನು ಯೋಗ್ಯತಸಾರ ಕರಕೊಂಡು ಹೋಗುವ ರೂಪ.  ಪ್ರಾಣದೇವರ ಮಕ್ಕಳಿಗೂ ಅದೇ ಹೆಸರು ಅದೇ ರೂಪ.    ನಮ್ಮದು ಪಂಚಭೂತ ದೇಹ.  ಪ್ರಾಣ ನಾಮಕ ನೀರಿನ ಭಾಗ ನಿಯಂತ್ರಣ ಮಾಡುತ್ತಾನೆ.  ಶೇಷ ರೂಪ -  ಪ್ರಾಣ ರೂಪ. ಗರುಡ - ಅಪಾನ ರೂಪ; ಇಂದ್ರ - ವ್ಯಾನ ರೂಪ; ರುದ್ರ - ಉದಾನ ರೂಪ.  ಅಪಾನ ನಾಮಕ ಮಣ್ಣಿನ ಭಾಗವನ್ನು ನಿಯಂತ್ರಣ ಮಾಡುತ್ತಾನೆ. ದೇಹದಲ್ಲಿ ೭೨,೦೦೦ ನಾಡಿಗಳಿವೆ.  ಸುಶಮ್ನ ನಾಡಿ ಪ್ರಧಾನ.  ಇದು ಬ್ರಹ್ಮ ನಾಡಿ.  ದೇವತೆಗಳೂ ಮುಖ್ಯಪ್ರಾಣನನ್ನು ಉಪಾಸನೆ ಮಾಡುತ್ತಾರೆ.  ಇದು ಲಿಂಗ ದೇಹ.  ಗೂಟ - ನಾರಯಣ; ದಾರ - ಲಕ್ಷ್ಮಿ;  ಪ್ರಾಣದೇವರು - ಕರು.  ಅಮುಖ್ಯ ಪ್ರಾಣದೇವರ ಒಳಗೆ ಒಳಗಡೆ ನಿಂತು ಪರಮಾತ್ಮ ಪ್ರೇರಣೆ ಮಾಡುತ್ತಿದ್ದಾನೆ.  ಇದು ಪರಮಾತ್ಮನ ಮಹಿಮೆ ಎಂದು ಬ್ರಹ್ಮ ಸೂತ್ರ ತಿಳಿಸುತ್ತದೆ.  ದೇವರು ಮದ್ಯಭಾಗದಲ್ಲಿ ವಾಮನ ರೂಪದಿಂದಿದ್ದಾನೆ.  ಮದ್ಯಭಾಗ ಅಂದರೆ ಹೃದಯ. ಹೃದಯದಲ್ಲಿ ಅಂಗುಷ್ಟ ಪರಿಮಾಣದಲ್ಲಿದ್ದಾನೆ.  ಪರಮಾತ್ಮ ವಾಯುದೇವರಿಗೆ ಪ್ರೇರಕನಾಗಿದ್ದಾನೆ.  ಪವಮಾನ ಶುದ್ದವಾಗಿ ರಕ್ಷಣೆ ಮಾಡುತ್ತಾನೆ.  ಪರಮಾತ್ಮನಿಗೆ ಈ ಹೆಸರು.  ರುದ್ರ ದೇವರಿಗೆ ಪ್ರೇರಕನಾಗಿದ್ದಾನೆ.

 

ಎಲ್ಲಾ ಇಂದ್ರಿಯಗಳಿಗೆ ನಿಯಾಮಿಕರಾಗಿದ್ದಾರೆ.  ಶೃತಿ ಇಂದ್ರ ನಿತ್ಯ ಅಂತ ಹೆಳತ್ತೆ.  ಪ್ರಳಯಕಾಲದಲ್ಲಿ ಬಿಡಿಬಿಡಿಯಾಗಿ ಇರತ್ತೆ. ಇಂದ್ರಿಯಗಳು ಸೂಕ್ಷ್ಮರೂಪದಿಂದ ಇರತ್ತೆ ಪ್ರಳಯಕಾಲದಲ್ಲಿ.  ಇಂದ್ರಿಯಗಳು ಕೆಲಸ ಮಾಡುವುದಿಲ್ಲ..  ಸೃಷ್ಟಿಯಲ್ಲಿ ಇದಾಗತ್ತೆ.  ಬ್ರಹ್ಮಾಂದ ನಿರ್ಮಾಣವಾಗುತ್ತದೆ.  ಪಂಚಭೂತಗಳು ಬೆಳಿಯತ್ತವೆ.  ಪಂಚಭೂತದಿಂದ ತತ್ತ್ವ ನಿರ್ಮಾಣವಾಗುತ್ತದೆ.  ಭ್ರಹ್ಮಾಂಡತರವೇ ಪಿಡಾಂಗ.    ಲಿಂಗದೇಹವನ್ನು ಶೂದಶಕಲೆ ಎಂದು ಕರೆಯುತ್ತಾರೆ.    ವ್ಯೆಕಾರಿಕ ಅಹಂಕಾರದಿಂದ ಮನಸ್ಸು ಹುಟ್ಟಿತು.  ಪ್ರಾಣ ಪ್ರವೇಶ ಮಾಡಿದಮೇಲೆ ಮನಸ್ಸು.  ಆಮೇಲೆ ಎಲ್ಲ ಇಂದ್ರಿಯಗಳು ಬೆಳೆಯುತ್ತವೆ.  ಆಮೇಲೆ ಪಂಚಭೂತಗಳು ಬೆಳೆಯುತ್ತವೆ.  ಇಂದ್ರಿಯ ಬೆಳಕಿನಮೂಲಕ ಕೆಲಸ ಮಾಡುತ್ತವೆ.  ದೇಹದ ಒಳಗಡೆ ಪ್ರಾಣ, ಹೊರಗಡೆ ವಾಯು.  ಪ್ರಾಣದೇವರು ಹೃದಯದಲ್ಲಿ ಇದ್ದಾರೆ.  ಎಚ್ಚರದಲ್ಲಿ ಎಲ್ಲಾ ಇಂದ್ರಿಯಗಳು ಕೆಲಸ ಮಾಡುತ್ತವೆ.  ನಿದ್ರೆಯಲ್ಲಿ ಯಾವ ಇಂದ್ರಿಯಗಳು ಕೆಲಸ ಮಾಡುವುದಿಲ್ಲ.   ಎಲ್ಲಾ ಇಂದ್ರಿಯಗಳು ನಮ್ಮ ಕ್ಯೆಲೆ ಇದೆ ಅಂದುಕೊಂಡಿದ್ದೇವೆ.  ಇದು ಹೇಗೆಂದರೆ ಯಾರಾದರು ಒಂದು ವಸ್ತುವನ್ನು ಬೇರೊಬ್ಬರಿಂದ ತೆಗೆದುಕೊಂದು ಅದು ನಮ್ಮದೆ ಅಂತ ಹೇಳುವಹಾಗೆ.  ಇಂದ್ರಿಯಗಳು  ಪರಮಾತ್ಮನದೆ ಅಂತ ತಿಳಿಯಬೇಕು.  ಉಸಿರಾಟ ಕೆಲಸ  ಯಾವಾಗಲೂ ಆಗುತ್ತಾಇರತ್ತೆ.  ಹೃದಯದಲ್ಲಿ ನಿಂತು ಮುಖ್ಯಪ್ರಾಣ ಈ ಕೆಲಸವನ್ನು ಮಾಡುತ್ತಿರುತ್ತಾರೆ. ಇವರನ್ನು ಮಧ್ಯಮ ಪ್ರಾಣ ಅಂತ ಕರೀತಾರೆ.  ದೇಹದ ಮಧ್ಯಮ ಭಾಗ ಹೃದಯ.  ಮಧ್ಯ ಭಾಗದಲ್ಲಿ ವಾಮನನಿದ್ದಾನೆ.  ಮುಖ್ಯಪ್ರಾಣ ಹುಟ್ಟು ಸಾವು ನಡುವೆ ಇದ್ದಾರೆ.  ಯಾವಗಲೂ ಯೌವನದಲ್ಲಿ ಇದ್ದಾರೆ.  ಪ್ರಳಯಕಾಲದಲ್ಲೂ ಇರುತ್ತಾರೆ.  ಪ್ರಾಣದೇವರೆ ಎಲ್ಲಾ ಇಂದ್ರಿಯಗಳಿಗೆ ನಿಯಾಮಿಕರಾಗಿದ್ದಾರೆ.  ಪ್ರಾಣದೇವರಿಗೆ ಪರಮಾತ್ಮ ನಿಯಾಮಕನಾಗಿದ್ದಾನೆ.  ಮುಖ್ಯಪ್ರಾಣರನ್ನು ಅವಾಂತರೆ ಈಶ್ವರ ಅಂತ ಕರೀತಾರೆ.  (ವಾಯುದೇವರು ಸೂರ್ಯಮಂಡಲದಲ್ಲಿ ಇದ್ದಾರೆ.  ಸೂರ್ಯೋದಯದಲ್ಲಿ ಕಾಣುವ ಕಿರಣಗಳೆ ವಾಯುಸ್ತುತಿಯಲ್ಲಿ ವಿವರಿಸುವ "ಉತ್ಕಂಟಕುಂಟ"....ದಲ್ಲಿ ಇದೆ)  ತತ್ತ್ವಾಭಿಮಾನಿ ದೇವತೆಗಳಿಗೆ ಸಾಮರ್ಥ್ಯ ಕೊಡುವುದು ಮುಖ್ಯಪ್ರಾಣ ದೇವರು.  ಇದನ್ನು ಬ್ರಹ್ಮಸೂತ್ರ ಭಾಷೆಯಲ್ಲಿ ಹೇಳಿದೆ.

 

ಜೀವರಾಗಿ ಮನುಷ್ಯೋತ್ತಮರು ಮೋಕ್ಷಕ್ಕೆ ಹೋಗುವುದು.

ಋಷಿಗಳು, ಗಂದರ್ವರು, ಚಕ್ರವರ್ತಿಗಳು, ರಾಜರು  - ೧೦೦ ಜನ ಮೋಕ್ಷಕ್ಕೆ ಹೋಗುವುದು

ದೇವತೆಗಳ  ಉಪಾಸನೆ ಜಾಸ್ತಿ.

ಮನುಷ್ಯರು  ೪ ಗುಣ ಉಪಾಸನೆ ಮಾಡಬೇಕು.

ಸತು, ಚಿತು, ಆನಂದ, ಆತ್ಮ ಎಂಬ ೪ ಗುಣಗಳು. ಸತು ನಿರ್ದೋಷ, ಚಿತು ಅಂದರೆ ಜ್ಞಾನ, ಆನಂದ ಸ್ವರೂಪ, ಆತ್ಮ ಅಂದರೆ ಸ್ವಾಮಿ.  ಈ ೪ ದೇವರ ಗುಣಗಳನ್ನು ಉಪಾಸನೆ ಮಾಡಬೇಕು. ಏಕಗುಣೋಪಾಸಕರು ಇಲ್ಲೆ ಮೋಕ್ಷ ಹೊಂದುತ್ತಾರೆ.  ಪರಮಾತ್ಮನನ್ನು ಸ್ವಾಮಿ ಅಂತ ಉಪಾಸನೆ ಮಾಡುತ್ತಾರೆ. ಅವರ ಉಪಾಸನೆ ಕಡಿಮೆ.  ಅದಕ್ಕೆ ಅವರು ಇಲ್ಲೆ ಮೋಕ್ಷ ಹೊಂದುತ್ತಾರೆ.

ಅಪರೋಕ್ಷ ಜ್ಞಾನ ಬಂತು ಅಂದರೆ ಕರ್ಮಕ್ಷಯ.  ಕರ್ಮ ನಾಶವಾಗತ್ತೆ.  ಸಂಚಿತ ಕರ್ಮ ಅಂದರೆ ನಾವು ಕೂಡಿಸಿಟ್ಟಿದ್ದು. ಉ.ದಾ: ಗೊಡೌನಿನಲ್ಲಿ ೧೦೦ ಅಕ್ಕಿ ಮೂಟೆ ಕೂಡಿಹಾಕಿರುತ್ತೆ.  ಅದರಲ್ಲಿ ೧ ಮೂಟೆಯನ್ನ ಉಪಯೋಸುತ್ತಾ ಇರತ್ತೆ. ಸಂಚಿತ ಕರ್ಮ ನಾವು ಕೂಡಿಟ್ಟಿರುವದು. ೧ ಮೂಟೆ ಉಪಯೋಗಿಸಿದ್ದು ಪ್ರಾರಬ್ಧ ಕರ್ಮ.  ಸಂಚಿತ ಕರ್ಮ ನಾಶವಾಗತ್ತೆ.  ಮೊದಲು ಉತ್ಕ್ರಾಂತಿ.  ದೇಹದಿಂದ ಹೊರಗಡೆ ಹೋಗುವದು.  ಮೊದಲು ಶ್ವೇತದಲ್ಲಿ ನೋಡುವದು.  ಪ್ರಳಯಕಾಲದಲ್ಲಿ ಆನಂದ ರೂಪವಿರುವದಿಲ್ಲ.   ಸೃಷ್ಟಿಯಲ್ಲಿ  ಶ್ವೇತದೀಪದಲ್ಲಿ ಪರಮಾತ್ಮನದು ವಾಸುದೇವ ರೂಪ.  ಬ್ರಾಹ್ಮಣ ವೇದವನ್ನು ಅಧ್ಯಾಯನ ಮಾಡಲೆಬೇಕು. ಜ್ಞಾನದಲ್ಲಿ  ಈ ಗುಣಗಳನ್ನು ಉಪಾಸನೆ ಮಾಡಬೇಕು.  ದೇವತೆಗಳ ಉಪಾಸನೆ ಇದಕ್ಕಿಂತ ಜಾಸ್ತಿ.  ಬ್ರಹ್ಮ ಪರಮಾತ್ಮನ ಅಖಿಲ ಗುಣಗಳನ್ನು ಉಪಾಸನೆ ಮಾಡುತ್ತಾನೆ.  ಸರಸ್ವತಿ ಮತ್ತು ಭಾರತಿ ದೇವಿಯರು ಪರಮಾತ್ಮನಲ್ಲಿ ನಿತ್ಯ ಕ್ರಿಯೆ ಇದೆ ಎಂದು ಉಪಾಸನೆ ಮಾಡುತ್ತಾರೆ.  ಅವರು ಪರಮಾತ್ಮನ ಗುಣಗಳನ್ನ ಉಪಾಸನೆ ಮಾಡುವುದಿಲ್ಲ.  ರುದ್ರ ದೇವರು ನಿತ್ಯ ಗುಣವಿದೆ ಎಂದು ಉಪಾಸನೆ ಮಾಡುತ್ತಾರೆ.  ಪಾರ್ವತಿದೇವಿ ಎಲ್ಲಾ ರೂಪ ಗುಣವಿದೆಯೆಂದು ಉಪಾಸನೆ ಮಾಡುತ್ತಾರೆ. ಲಕ್ಷ್ಮಿದೇವಿ ಒಂದೊಂದು ಗುಣದಲ್ಲಿ ಅನಂತ ರೂಪವಿದೆ ಅಂತ ನೋಡುತ್ತಾಳೆ.  ಅವರವರಲ್ಲೆ ವ್ಯತ್ಯಾಸ ಇದೆ. 

ದೇವತೆಗಳು ಅಂಶ ರೂಪದಲ್ಲಿ ನಮ್ಮ ಹಾಗೆ ಮೋಕ್ಷಕ್ಕೆ ಹೋಗುತ್ತಾರೆ.

ಮನುಷ್ಯ ಮೋಕ್ಷ ಕ್ರಮ - ಮೊದಲು ಅಪರೋಕ್ಷ, ಆಮೇಲೆ ಉತ್ಕ್ರಾಂತಿ ಹೊಂದುತ್ತಾರೆ. ಅಂದರೆ ಈ ದೇಹ ಬಿಟ್ಟು ಮೇಲೆ ಹೋಗುವುದು. ಶ್ವೇತ ಬೆಳಕಿನಿಂದ ಹೊರಗಡೆ ಹೋಗುತ್ತಾರೆ.  ಹೃದಯದ ತುದಿಯಲ್ಲಿ  ಪರಮಾತ್ಮ ಬೆಳಕುಬಿಟ್ಟು   ಮೊದಲು ಅರ್ಚಿಯ ಲೋಕ(ಅಗ್ನಿಯ ಮಗ)  ಇವರು ಭೇಟಿಮಾಡಿ ಸತ್ಕಾರ ಮಾಡುತ್ತಾರೆ.  ಆಮೇಲ ಪ್ರವಹಾ ವಾಯು ಲೋಕ  (ಮುಖ್ಯಪ್ರಾಣ ದೇವರ ಮಗ), ಆಮೇಲೆ ಅಹರ್ ಲೋಕ  ಆಮೇಲೆ ಪೂರ್ವ ಪಕ್ಷ.  ಆಮೇಲೆ ಸಂವತ್ಸರ ದೇವರ ಲೋಕ,   ಆಮೇಲೆ ಕಟಿತ್(ವಿದ್ಯುತ್ ಲೋಕ),  ಆಮೇಲೆ ವರುಣ ಲೋಕ.  ಅಲ್ಲಿ ರೋಗವೇ ಇಲ್ಲ - ಸೂರ್ಯ ಲೋಕ - ಸೋಮ ಲೋಕ  ಇಲ್ಲಿ ಶಿಂಶು ರೂಪ ದರ್ಶನ.  ಚೇಳಿನ ಆಕಾರದಲ್ಲಿ ಪರಮಾತ್ಮ.  ಆಮೇಲೆ ಇಂದ್ರ ಲೋಕ - ದ್ರುವ ಲೋಕ - ಭಾರತಿದೇವಿ ಲೋಕ -ವಾಯುದೇವರನ್ನು ಹೊಂದುತ್ತಾರೆ.  ವಾಯುದೇವರ ಮೂಲಕ ಪರಮಾತ್ಮನ ಹತ್ತಿರ ಹೋಗುತ್ತಾರೆ.  ಕಾರ್ಯ ಬ್ರಹ್ಮ-ಚತುರ್ಮುಖ ಬಹ್ಮನ ಹತ್ತಿರ ಹೋಗುತ್ತಾರೆ.  ದೇವತೆಗಳು ಅಪ್ರತೀಕಾರರು  ಅವರು ನೇರವಾಗಿ ಕಾರಣಬ್ರಹ್ಮನ ಹತ್ತಿರ ಹೋಗುತ್ತಾರೆ.  ಪ್ರಳಯಕಾಲದಲ್ಲಿ ಎಲ್ಲರೂ ಚತುರ್ಮುಖ ಬ್ರಹ್ಮನ ಹತ್ತಿರ ಬರಲೇ ಬೇಕು.  ವಿರಾಜ ನದಿಯಲ್ಲಿ ಲಿಂಗಭೇದ.  ಬ್ರಹ್ಮನ ಹತ್ತಿರ ಹೋಗುತ್ತಾರೆ.  ಜೀವರು ಪ್ರತೀಕಾರರು. ಇವರನ್ನು ಕಾರ್ಯಬ್ರಹ್ಮನ ಹತ್ತಿರ ಬಿಡುತ್ತಾರೆ.  ಪ್ರಳಯಕಾಲದಲ್ಲಿ ವಾಯುದೆವರನ್ನ ಲಕ್ಷ್ಮಿದೇವಿ ನುಂಗಿಬಿಡುತ್ತಾಳೆ.  ದೇಹ ಜೀರ್ಣವಾದರು, ಜ್ಞಾನ ಹೋಗುವುದಿಲ್ಲ. ಅವರನ್ನು ನಿತ್ಯ ಅಂಶ ಅಂತ ಅದಕ್ಕೆ ಹೇಳುವುದು.  ಇದು ಪರಮಾತ್ಮನನ್ನು ಸೇರುವ ಒಂದು ಕ್ರಮ.   ಇನ್ನೊಂದು ಕ್ರಮ ವಾಯುದೇವರು ಲಕ್ಷ್ಮಿಗೆ ನಮಸ್ಕಾರ ಮಾಡಿ ನಾರಾಯನನ್ನು ಸೇರುತ್ತಾರೆ.  ಆಮೇಲೆ ಬ್ರಹ್ಮ ಪದವಿಯನ್ನು ಪಡೆಯುತ್ತಾರೆ.  ಬ್ರಹ್ಮಸೂತ್ರದಲ್ಲಿಈ ರೀತಿ ತಿಳಿಸಿದೆ.

 

ಸಂಕಲನ: ಜೆ. ಸುಧೀಂದ್ರ ಸಿಂಹ, ಬೆಂಗಳೂರು.

 

 


Featured Post

Sarvamoola grantha parichaya

Sarvamoola Granthagala parichaya By Shri Nagendrachar   To understand Bhagavantha is a great sadhana.   In the ancient days people w...