suMdara kaaMDa

 

 

 

ಸುಂದರ ಕಾಂಡ     ವಿದ್ವಾನ್ ಸತ್ಯಮೂರ್ತಿ ಆಚಾರ್ಯ

 

ಸುಂದರಕಾಂಡದಲ್ಲಿ ೬೮ ಸರ್ಗಗಳಿವೆ.  ಅಭೀಷ್ಟಗಳು ಈಡೇರುತ್ತವೆ.  ಶ್ರೀ ವಿಶ್ವೇಶ್ವರತೀರ್ಥರು ಅವರ  ಸುಂದರಕಾಂಡವನ್ನು ನಿತ್ಯ ಪಾರಾಯಣಮಾಡುತಿದ್ದರಂತೆ ಅವರು ಚಿಕ್ಕವರಾದ್ದಾಗ.  ಅವರ ಈ ಲವಲವಿಕೆಯು ಈ ವಯಸ್ಸಿನಲ್ಲೂ ಹೀಗೆ ಇರುವಿದಕ್ಕೆ ಸುಂದರಕಾಂಡ ಪಾರಾಯಣದಿಂದ ಅಂತ ಹೇಳಿದ್ದಾರೆ.

 

ಸುಂದರ ಎಂದರೆ ವಿಜಯಾರಂಬ.  ವಿಜಯ ಆರಂಬ ವಾಯಿತು ಅಂತ ಅರ್ಥ.  ಸುಂದರವಾದ ರಾಮನ ವರ್ಣನೆ ಬರುತ್ತೆ,  ಇದಕ್ಕೆ ರಾಮನ ಕಾಂಡ ಅಂತ ಹೆಸರೂ ಇದೆ,  ಸುಂದರ ಕಾಂಡದಲ್ಲಿ ಸೀತೆ ಸುಂದರವಾಗಿ ಇದ್ದಾಳೆ.  ಎಲ್ಲವು ಪರಮ ಸುಂದರ ಮತ್ತು ಮನೋಹರವಾದ ಕಥೆ. ಇದೇ ರಾಮಾಯಣದ ವೇದ ಸಾರ.           (ವೇದದ ಮಂತ್ರ - ಗಾಯತ್ರಿ ಮಂತ್ರ). 

ಸೂರ್ಯ - ಗುರುಗಳು - ಹನುಮಂತ ವ್ಯಾಕರಣ ಕಲೆಯುತ್ತಾರೆ ಸೂರ್ಯನಿಂದ.  ಅದಕ್ಕೆ ಸೂರ್ಯನಿಗೆ ನಮಸ್ಕಾರ ಮಾಡುತ್ತಾನೆ.  ಇಂದ್ರ ದೇವರು - ರಾವಣ ಸೀತ ಅಪಹರಣ ಸಮಯದಲ್ಲಿ ಇಂದ್ರ ದೇವರ ಪ್ರವೇಶವಾಯಿತು  ಸೀತ ರತಿಕೃತಿ ಆಗಿ ಅಪಹರಣವಾಯಿತು.  ಅದಕ್ಕೆ ಇಂದ್ರದೇವರಿಗೆ ನಮಸ್ಕಾರ ಮಾಡಿದ್ದು.  ವಾಯು ದೇವರು ತಂದೆ - ಅದಕ್ಕೆ ನಮಸ್ಕಾರ.  ಚತುರ್ಮುಖ ಬ್ರಹ್ಮ - ಎಲ್ಲರಿಗು ಗುರುಗಳು-ಸಾದರಣ ಗುರುಗಳು.   ಅಂದರೆ ಎಲ್ಲರಿಗೂ ಗುರುಗಳು.  ಅದಕ್ಕೆ ಅವರಿಗೆ ನಮಸ್ಕಾರ.  ಭೂತಗಳಿಂದ ತೊಂದರೆ ನಿವಾರಣೆಗಾಗಿ ಭೂತಗಳಿಗೂ ನಮಸ್ಕಾರ ಮಾಡಿದರು.  ಹೀಗೆ ಅವರಿಗೆಲ್ಲಾ ನಮಸ್ಕಾರ ಮಾಡಿದರು ಹಾರುವಿದಕ್ಕೆ ಮುಂಚೆ.  ಮನಸ್ಸಿನಲ್ಲಿ ರಾಮದೇವರ ಸ್ಮರಣೆ ಮಾಡಿ ಹಾರಿದರು.  ಹನುಮಂತ ೩೦ ಯೋಜನ ಎತ್ತ್ತರ ೧೦ ಯೋಜನ ಅಗಲ ಬೆಳೆದು ನಿಂತರು ಹಾರುವುದಿಕ್ಕೆ ಮುಂಚೆ ಭೂಮಿಯನ್ನು ಒತ್ತಿದನಂತೆ ಯಾಕೆಂದರೆ ರಾಮನ ಪೂಜೆಗೆ ನೀರು ಬೇಕು.  ಒಳಗಿನಿಂದ ನೀರು ಬಂತು.  ನೀರಿನಿಂದ ಅಭಿಷೇಕ ಮಾಡಿದ.  ಗಂಧದ ಮರದಿಂದ ಗಂಧ ಲೇಪನ ಮಾಡಿದ.   ಉದರಿಸಿದ ಹಣ್ಣುಗಳಿಂದ ನ್ಯೆವೇದ್ಯ ಮಾಡಿದ.   ಮತ್ತೊಂದು ಸಾರಿ ಜೋರಾಗಿ ಭೂಮಿಯನ್ನು ಒತ್ತಿದ. ಆವಾಗ ಸರ್ಪಗಳ ಮೂಲಕ ಬೆಂಕಿ ಬಂತು.  ಅದೇ ರಾಮನಿಗೆ ಮಾಡಿದ ಮಂಗಳಾರತಿ.  ರಾಮದೇವರಿಗೆ ನಮಸ್ಕಾರ ಮಾಡಿ ಹಾರುವುದಿಕ್ಕೆ ನಿಂತ.  ಹೊರಡುವಾಗ ಹನುಮಂತನ ಮಾತುಗಳು ಇವು.  "ರಾಮಚಂದ್ರನ ಶರವೇಗ ಬಾಣ.  ರಾಮಚಂದ್ರನು ಬಿಟ್ಟ ಬಾಣ ಹೋಗುತ್ತಿದೆ.  ರಾಮನ ಬಾಣವಾಗಿ ಹೋಗುತ್ತಿದ್ದೇನೆ".  ವೇಗವಾಗಿ ಹಾರುವುದಕ್ಕೆ ಶುರುವು ಮಾಡಿದ ಹನುಮಂತ.  ಅವನ ಹಿಂದೆ ಮರಗಳು, ಮೃಗಪಕ್ಷಿಗಳು  ಹಿಂಬಾಳಿಸಿ ಸ್ವಲ್ಪ ದೂರ ಬೀಲ್ಕೊಟ್ಟವು.  ವಾಲ್ಮೀಕಿ ಸಾಗರ ಎಂಬ ಶಬ್ದ ಉಪಯೋಗಿಸಿದ್ದಾರೆ.    ಸಾಗರ ಚಕ್ರವರ್ತಿ ಮಕ್ಕಳು  ಭೂಮಿ ಅಗೆಯುವಾಗ ಸಾಗರ ಬಂತು.  ಸಾಗರದ ಒಳಗೆ ಮ್ಯೆನಾಕ ಪರ್ವತವಿತ್ತು.  ಮ್ಯೆನಾಕನಿಗೆ ವರುಣನಿಂದ ಆಜ್ಞೆ ಸಹಾಯ ಮಾಡುವಿದಕ್ಕೆ.  ಮ್ಯೆನಾಕ ಹನುಮಂತನಿಗೆ ವಿಶ್ರಾಂತಿ ಪಡೆದು ಹೋಗು ಅಂತ ಕೇಳಿಕೊಳ್ಳುತ್ತಾನೆ.  ಅದಕ್ಕೆ ಹನುಮಂತ "ನನಗೆ ಯಾವ ವಿಶ್ರಾಂತಿಯು ಬೇಡ  ನಿನ್ನ ಮಾತಿನಿಂದಲೆ ಸಂತೋಶವಾಯಿತು.  ರಾಮನ ಕೆಲಸಕ್ಕೆ ಹೋಗುತ್ತಿದ್ದೇನೆ.  ನಾನು ಎಲ್ಲು ನಿಲ್ಲುವುದಿಲ್ಲ ರಾಮನ ಕೆಲಸದಲ್ಲಿ ಆಯಾಸ ಇಲ್ಲವೆ ಇಲ್ಲ"  ಹೀಗೆ ಹೇಳಿ ಹನುಮಂತ ಮ್ಯೆನಾಕನಿಗೆ ದೇಹ ಸ್ಪರ್ಶ ಮಾಡಿ ಹೋಗುತ್ತಾನೆ. ದೇವತೆಗಳು ಹನುಮಂತನನ್ನು ಪರೀಕ್ಷಿಸಲು ಸುರಸೆಯನ್ನು ಸೃಷ್ಟಿ ಮಾಡಿ ಅವಳ ಎದುರು ಯಾರು ಬಂದರೂ ಬಾಯಲ್ಲಿ ಬಿದ್ದು ನುಂಗುವ ವರವನ್ನು ಕೊಟ್ಟು  ಕಳುಹಿಸುತ್ತಾರೆ.    ಸುರಸೆ ವಿಕೃತ ರೂಪ ಮತ್ತು ಘೋರ ರಾಕ್ಷಸಿ ಕೂಡ.   ಹನುಮಂತ ಅವಳು ಎದುರು ಬಂದು ನಿಂತಾಗ, "ರಾಮ ಹೆಂಡತಿಯನ್ನು ಕಳೆದುಕೊಂಡಿದ್ದಾನೆ, ಅವನ ಕೆಲಸಕ್ಕೆ ಹೋಗುತ್ತಿದ್ದೇನೆ, ತೊಂದರೆ ಮಾಡಬೇಡ" ಅಂತ ಹೇಳಿದರೂ ಸುರಸೆ ಅವನನ್ನು ನುಂಗುವದಕ್ಕೆ ಬರುತ್ತಾಳೆ.  ಆಗ ಹನುಮಂತ ೪೦ ಯೋಜನೆ ಅಷ್ಟು ಗಾತ್ರ ಮಾಡುತ್ತಾನೆ.  ಅವಳು ೬೦ ಯೋಜನೆಯಾದರೆ ಇವನು  ೭೦ ಯೋಜನೆ ಹೀಗೆ ಬೆಳೆಯುತ್ತಾ ಹೋಗುತ್ತಾನೆ.   ಅವಳ ಬಾಯಿ ದೊಡ್ಡದಾಗಿ ತೆಗೆದಾಗ ಹನುಮಂತ ಸೂಕ್ಷ್ಮ ರೂಪ ತಾಳಿ ಬಾಯಿ ಒಳಗೆ ಹೋಗಿ ಅವಳು ಬಾಯಿ ಮುಚ್ಚುವದೊರಳಗೆ ಬಾಯಿಯಿಂದ ಹೊರಗೆ ಬಂದುಬಿಡುತ್ತಾನೆ,  ದೇವತೆಗಳ ವರವನ್ನು ನಡೆಸಿ ಅವರಿಗೆ ಹರ್ಷವಾಗುವಂತೆ ಹನುಮಂತ ಮಾಡುತ್ತಾನೆ.  ಇನ್ನೊಂದು ರಾಕ್ಷಸಿ ಸಿಂಹಿಕಾ ಲಂಕಾ ಪಟ್ಟಣವ ಕಾಯುವವಳು ಎದುರಾಗುತ್ತಾಳೆ.  ಸತ್ಯಧರ್ಮತೀರ್ಥರು ಅವಳನ್ನು ಹಿಂಸಿಕಾ ರಾಕ್ಷಸಿ ಅಂತ ಕರೆದಿದ್ದಾರೆ.  ಹನುಮಂತ ದೇವರು ಅವಳಿಗೆ ಕೋಪವನ್ನು ಮಾಡಿಕೊಳ್ಳದೆ ಹೊಡದೇಬಿಟ್ಟರು.  ಅವಳಿಗೆ ನೆರಳನ್ನು ಎಳೆಯುವ ಶಕ್ತಿ.  ಅವಳ ಕಾಲುಹಿಡಿದು  ಸಿಂಹಿಕಿ ಹೊಟ್ಟೆ ಒಳಗೆ ಪ್ರವೇಶಮಾಡಿ ಹೊಟ್ಟೆ ಸೀಳಿ ಹೊರಗೆ ಬರುತ್ತಾರೆ ಹನುಮಂತ ದೇವರು.  ಹನುಮಂತದೇವರು ಮೂರು ವಿಘ್ನಗಳನ್ನು  ಎದುರಿಸುತ್ತಾರೆ.  ಮೊದಲಹೆಯದು ಮ್ಯನಾಕ ಪರ್ವತ,   ಎರಡೆಯದು  ದೇವತೆಗಳಿಂದ ಬಂದ ವಿಘ್ನ - ಸುರಸೆ ರಾಕ್ಷಸಿ.  ಮೂರನೆಯದು  ಸಿಂಹಿಕರಾಕ್ಷಸಿ.  ಒಳ್ಳೆ ಕೆಲಸಕ್ಕೆ ಹೋಗುವಾಗ ವಿಘ್ನಗಳನ್ನು ಹೇಗೆ ಎದುರಿಸಬೇಕು  ಅಂತ ಹನುಮಂತದೇವರು ತೋರಿಸಿಕೊಟ್ಟಿದ್ದಾರೆ.  ಇದೆಲ್ಲಾ ಪರಿಹಾರ ಮಾಡಿಕೊಂಡಿದ್ದಾರೆ ಹನುಮಂತದೇವರು.  ೧೦೦ ಯೋಜನ ದುರ್ಗಮ ಮಾರ್ಗ ಸಾಗರವನ್ನು ಹನುಮಂತ ದೇವರು ಹಾರಿ ತ್ರಿಕೂಟ ಪರ್ವತವನ್ನು ಸೇರಿದರು.  ಲಂಕೆಯನ್ನು ನೋಡಿದಾಗ ಎಲ್ಲಾ ಸುವರ್ಣಮಯ, ಎಲ್ಲಾ ಕಡೆ ಬಂಗಾರ ಎಲ್ಲಾ ಗೃಹಗಳೂ ಬಂಗಾರಮಯ.  ರಾತ್ರಿ ಬಂದಾಗ ಸ್ವರ್ಗದಂತೆ ಇತ್ತು.  ಕುಬೇರ ಕಟ್ಟಿದ ಅದ್ಭುತವಾದ ಲಂಕೆಯನ್ನು ರಾವಣ ಕಸಿದುಕೊಂಡಿದ್ದ.  ತ್ರಿಕೂಟಪರ್ವತದಲ್ಲಿ ನಿಂತ ಹನುಮಂತನಿಗೆ ಆಯಾಸವೆ ಆಗಲಿಲ್ಲ..  ಹನುಮಂತದೇವರು ೧೦೦ ಯೋಜನೆ ಇರುವ ಸಮುದ್ರ ದಕ್ಷಿಣದಿಕ್ಕಿನಲ್ಲಿ ಇದ್ದರೂ ಬೇರೆ ದಿಕ್ಕಿನಲ್ಲಿ  ಹೆಚ್ಚಿನ ಯೋಜನೆ ಇರುವ ಸಮುದ್ರವಿತ್ತು.  ಆದರೆ ಬೇರೆ ದಿಕ್ಕಿನಲ್ಲಿ ಇರುವ ಸಮುದ್ರದಲ್ಲಿ ಅನೇಕ ದ್ವೀಪಗಳು ಮಧ್ಯದಲ್ಲಿದ್ದವು.  ೧೦೦ ಯೋಜನೆಯಲ್ಲಿ ಯಾವ ದ್ವೀಪವು ಇರಲಿಲ್ಲ.  ಇದು ರಾಮನಿಗೂ ಗೊತ್ತಿತ್ತು.  ಹನುಮಂತದೇವರು ಬೇರ ಕಪಿಗಳನ್ನು ಆ ದಿಕ್ಕಿಗೆ ಕಳಿಸಿ ಈ ದಕ್ಷಿನ ದಿಕ್ಕಿಗೆ ಬಂದಿದ್ದರು.   ಹನುಮಂತದೇವರು ಸೂರ್ಯನ ಜೊತೆ ಹೋಗುವಾಗ ಇದನ್ನೆಲ್ಲಾ ವೀಕ್ಷಿಸಿದ್ದರು.  ಸಂಪಾತಿಯಿಂದ ರಾಮನಿಗೆ  ರಾವಣ ದಕ್ಷಿಣದಿಕ್ಕಿನಲ್ಲಿ ಹೋಗಿದ್ದಾನೆ ಅಂತನೂ ಗೊತ್ತಿತ್ತು.  ಇದು ಸತ್ಯಧರ್ಮ ತೀರ್ಥರು ಕೊಡುವ ವ್ಯಾಖ್ಯಾನ.

ಹನುಮಂತದೇವರು  ಹೀಗೆ ಯೋಚಿಸುತ್ತಾರೆ.  ಅವರು, ಅಗಜ, ನೀಲ ಮತ್ತು ಸುಗ್ರೀವ ಇಲ್ಲಿಗೆ ಬರಬಹುದು.  ರಾಮಚಂದ್ರನಿಗೂ ಇಲ್ಲಿಗೆ ಬರುವುದಕ್ಕೆ ಆಗುವುದಿಲ್ಲ ಅಂತ ಚಿಂತನೆ ಮಾಡುತ್ತಾರೆ.  ಇದಕ್ಕೆ ಸತ್ಯಧರ್ಮತೀರ್ಥರು ಈ ಚಿಂತನೆಯ ಸ್ಪಿರಿಟ್ ತಿಳಿದುಕೊಳ್ಳಬೇಕು ಅಂತ ಹೇಳುತ್ತಾರೆ.

ರಾಮಚಂದ್ರ ಬಂದರೆ ಸಾಮ, ದಾನ, ಭೇದ, ದಂಡವನ್ನು ಉಪಯೋಗಿಸಬೇಕು. ಸಾಮ- ಸಾಮೋಪಾಯವಾಗುವುದಿಲ್ಲ.  ದಾನ - ಕಿತ್ತಿಕೊಂಡು ಬರುತ್ತಾನೆ,  ಅದು ಆಗುವುದಿಲ್ಲ.  ಭೇದ- ರಾಕ್ಷಸರಲ್ಲಿ ಜಗಳ ತಂದಿಡುತ್ತಾನೆ.  ಅದು ಆಗುವುದಿಲ್ಲ ಯಾಕೆಂದರೆ ರಾಕ್ಷಸರಲ್ಲಿ ಒಡಕೇ ಇಲ್ಲ.  ದಂಡ - ಯುದ್ದವನ್ನು ಮಾಡಬೇಕು.  ದೊಡ್ಡ ಸ್ಯೆನ್ಯವಿದೆ.  ರಾಮನಿಗೆ ಸಾಮರ್ಥ್ಯ ಇಲ್ಲ ಅಂತ ಅಲ್ಲ.

 

ಹೇಗೆ ಸೀತೆಯನ್ನ ಹುಡುಕಬೇಕೆಂದು  ಯೋಚನೆ ಮಾಡುತ್ತಿದ್ದಾನೆ ಹನುಮಂತ.  ಚಿಕ್ಕ ರೂಪ ಮಾಡಿಕೊಳ್ಳಬೇಕೆಂದು ಸಣ್ಣ ರೂಪ ಪಡೆದು ಹೊರಡುತ್ತಾನೆ.

ಆಕಾಶದಲ್ಲಿ  ದ್ವಜ, ತೋರಣ, ಅಲಂಕಾರವಾಗಿರುವ ಪಟ್ಟಣ ಕಾಣಿಸುತ್ತದೆ.  ಆಕಾಶದಲ್ಲಿ ಗಂಧರ್ವ  ನಗರ ಕಾಣಿಸುತ್ತದೆ. ಆ ಜಾಗದಲ್ಲಿ ದೊಡ್ಡ ಯುದ್ದ ಮತ್ತು ರಕ್ತಪಾತವಾಗುತ್ತದೆ ಅಂತ ಶಕುನ.

ಪಟ್ಟಣ ಪ್ರವೇಶಮಾಡುವ ಸಮಯದಲ್ಲಿ ಲಂಕಿನಿ ರಾಕ್ಷಸಿ ಕಾಣಿಸಿಕೊಳ್ಳುತ್ತಾಳೆ.  ಅವಳಿಗೆ ಲಂಕವನ್ನು ಕಾಪಾಡುವ ವರವಿರುತ್ತೆ.  ಹನುಮಂತನನ್ನು ನೋಡಿ ನೀನು ಯಾರು ಅಂತ ಕೇಳುತ್ತಾಲೆ.  ಅದಕ್ಕೆ ಹನುಮಂತದೇವರು ನಾನು ಲಂಕೆ ಪಟ್ಟಣವನ್ನು ನೋದುವುದಕ್ಕೆ ಬಂದಿದ್ದೀನಿ ಅಂತ ಹೇಳುತ್ತಾರೆ.  ಅಗ ಅವಳು ನನ್ನನ್ನು ಗೆದ್ದು ಒಳಗೆ ಹೋಗು ಅಂತ ಹೇಳುತ್ತಾಳೆ. ಹನುಮಂತದೇವರು ಎಡಗೈನಿಂದ ಒಂದು ಏಟು ಹೊಡೆದಾಗ ಕೆಳಗೆ ಬೀಳುತ್ತಾಳೆ.  ಅವಳು  ಒಬ್ಬ ದೇವತೆ.  ಅವಳು ನಂದಿಯನ್ನು ಕಪಿ ಎಂದು ಕರೆದಿದ್ದಕ್ಕೆ ಈ ರಾಕ್ಷಸಿ ರೂಪ ಬಂದಿರುತ್ತೆ.  ಒಂದು ಕಪಿ ಬಂದು ನಿನ್ನ ಹೊಡೆದಾಗ, ನೀನು ಶಾಪದಿಂದ ಮುಕ್ತಿಯಾಗುವೆ ಅಂತ ಚತುರ್ಮುಖ ಬ್ರಹ್ಮ ಹೇಳಿರುತ್ತಾರೆ.  ಲಂಕಿನಿ ಶಾಪವಿಮುಕ್ತಳಾದಮೇಲೆ, ಹನುಮಾಂತನಿಗೆ ಲಂಕಾ ಪಟ್ಟಣವನ್ನು ಪ್ರವೇಶಿಸುವುದಿಕ್ಕೆ ಅನುಮತಿ ಕೊಡುತ್ತಾಳೆ.  ಸೀತೆ ಸತಿಯಾಗಿದ್ದಾಳೆ ಅಂತ ಹೇಳಿ ತಿಳಿಸಿಕೊಟ್ಟಳು.  ಹನುಮಂತದೇವರು ಸವ್ಯ ಪಾದವನ್ನು  ಇಟ್ಟು ಪ್ರವೇಶ ಮಾಡುತ್ತಾರೆ.    ಪ್ರಯಾಣ ಮಾಡುವಾಗ, ಗೃಹ ಪ್ರವೇಶ ಕಾಲದಲ್ಲಿ, ವಿವಾಹ ಸಮಯದಲ್ಲಿ, ಹೆಣ್ಣನ್ನು ತುಂಬಿಸುವ ಕಾಲದಲ್ಲಿ ಬಲಗಾಲೂ ಇಟ್ಟು ಹೋಗಬೇಕು.  ಶತ್ರುವಿನ ಮನೆಗೆ ಹೋಗಬೇಕಾದರೆ ಎಡಗಾಲನ್ನು ಇಟ್ಟು ಹೋಗಬೇಕು.  ಸಿಂಹಿಕೆಯ ಒಳಗೆ ಹೋಗಿ ಸಂಹಾರ ಮಾಡುತ್ತಾರೆ, ಆದರೆ ಲಂಕಿನಿಗೆ ಒಂದು ಏಟು ಹೊಡದು ಬೀಳಿಸುತ್ತಾರೆ.  ಇದು ಪಕ್ಷಪಾತವೆಂದು ಕೇಳುವ ಪ್ರೆಶ್ನೆಗೆ ಸತ್ಯಧರ್ಮತೀರ್ಥರು  ಇದಕ್ಕೆ ಕಾರಣವೇನು ಅಂತ ಉತ್ತರಿಸಿದ್ದಾರೆ.  ಸಿಂಹಿಕೆ ರಾಕ್ಷಸಿ, ಲಂಕಿನಿ ದೇವತೆ.  ಧರ್ಮ ಎಲ್ಲಿ ಪಾಲನೆ ಮಾದಬೇಕೊ ಅಲ್ಲಿ ಮಾಡಬೇಕು ಅಂತ ಉತ್ತರಿಸಿದ್ದಾರೆ.

ಹನುಮಂತದೇವರು ಅದ್ಭುತವಾದ ಮನೆಗಳನ್ನು ನೋಡುತ್ತಾರೆ. ಪದ್ಮ ಗೃಹ, ಸ್ವಸ್ತಿಕ್ ಗೃಹ, ವರ್ದಮಾನ ಗೃಹ  ಸತ್ಯಧರ್ಮತೀರ್ಥರು ಮತ್ಸ್ಯ ಪುರಾಣದಲ್ಲಿ ಹೇಳಿರುವಹಾಗೆ ವಾಸ್ತು ಶಾಸ್ತ್ರದ ಪ್ರಕಾರ ಮನೆಗಳು ಇದ್ದವು ಅಂತ ಹೇಳಿದ್ದಾಎ..  ನಾಲಕ್ಕು ದಿಕ್ಕುಗಳಲ್ಲಿ ಬಾಗಿಲುಗಳು ಇದ್ದವಂತೆ.  ಜಪಮಾಡುವ ಧ್ವನಿ, ವೇದಮಂತ್ರ ಘೋಷಣೆ; ಸ್ವಾಧ್ಯಾಯ ನಿರಂತರವಾಗಿ  ನಡೆಯುತ್ತಿದೆ.  ಸತ್ಯಧರ್ಮತೀರ್ತರು  ಕರ್ಮಭೂಮಿಯಲ್ಲಿ ಫಲ ಇದ್ದರೂ ಅದು ರಾಕ್ಷಸ ಪಟ್ಟಣ ಆದರೂ ಅಲ್ಲೂ ಸ್ವಲ್ಪ ಫಲ ಇದೆ ಅಂತ ವ್ಯಾಖ್ಯಾನ ಮಾಡಿದ್ದಾರೆ.    ಅಂದು ಮಧ್ಯರಾತ್ರಿ, ಬೆಕ್ಕಿನಗಾತ್ರದಲ್ಲಿ ಹನುಮಂತದೇವರು ಹೋಗುತ್ತಿದ್ದಾರೆ, ಚಂದ್ರದ ಬೆಳದಿಂಗಳು ಇದೆ.  ಹುಡುಕುತ್ತಾ ಹೋಗುವಾಗ ಎಲ್ಲೂ ಸಿತಾ ಕಾಣಿಸುತ್ತಾ ಇಲ್ಲ.  ಪಟ್ಟಣವಿರುವ ದೊಡ್ಡ ಪುಷ್ಪಕ ವೀಮಾನ ಕಾಣಿಸಿತು.  ಬಾಯಿ ತೆರೆದು  ಕಣ್ಣು ಮುಚಿದ್ದ ಎರಡು ಕ್ಯೆಗಳು ಇದ್ದ ರಾವಣನ್ನು ನೋಡಿದರು.  ಸತ್ಯಧರ್ಮತೀರ್ಥರು ಇದಕ್ಕೆ ವಿವರ ಹೀಗೆ ಕೊಟ್ಟಿದ್ದಾರೆ - ರಾವಣ ಬಯಿಸಿದಾಗ ೨೦ ಕ್ಯೆಗಳು, ೨೦ ಕಣ್ಣುಗಳು, ೧೦ ತಲೆಗಳು  ಬರುತ್ತಿದ್ದವು ಅಂತ.  ಅಲ್ಲೆ ಹತ್ತಿರದಲ್ಲಿ ಬಂಗಾರದ ಮ್ಯೆ, ಸುಂದರವಾದ ಹೆಣ್ಣನ್ನು ನೋಡಿ, ಸೀತೆ ಅಂತ ಯೋಚನೆಮಾಡಿ ಸಂತೋಷಗೊಂಡು ಬಾಲಕ್ಕೆ ಮುತ್ತುಕೊಟ್ಟರು.  ಆಮೇಲೆ ಯೋಚಿಸಿ ರಾಮ ವಿಯೋಗವಾದ ಸೀತೆ ಹೀಗಿರುವದಿಲ್ಲ, ಇದು ಸೀತದೇವಿ ಅಲ್ಲ ಎಂದು ಮುಂದೆ ಹೋಗುತ್ತಿದ್ದಾರೆ.  ಸತ್ಯತೀರ್ಥರು ಇದಕ್ಕೆ ಹೀಗೆ ಹೇಳಿದ್ದಾರೆ - ಹನುಮಂತದೇವರದು ಶುದ್ದವಾದ ಜ್ಞಾನ.  ಅವರು ಸುಮ್ಮನೆ ನಟನೆ ಮಾಡಿದರು.  ಅವರಿಗೆ ಇದು ಮಂಡೋದರಿ ರಾವಣನ ಹೆಂಡತಿ, ಇಂತ ರೂಪವತಿ ಹೆಂಡತಿ ಇದ್ದರೂ  ಸೀತಾದೇವಿಯಮೇಲೆ ಕಣ್ಣು ಹಾಕಿದ ರಾವಣ ಎಂತ ನೀಚ  ಅಂತ ಯೋಚನೆ ಮಾಡುತ್ತಾರೆ ಹನುಮಂತ ದೇವರು ಅಂತ ತಿಳಿಬೇಕು.  ಮುಂದೆ ಹೋಗುತ್ತಾ ಇದ್ದಾರೆ.  ಎಲ್ಲಾ ಕಡೆಯೂ ಸುಗಂದ ಪರಿಮಳ.  ಕೆಲವು ಹೆಣ್ಣು ಮಕ್ಕಳು ಸುರಾಪಾನ   ಮಾಡಿಡ್ಡಾರೆ. ಅಸ್ತವ್ಯಸ್ತವಾಗಿ ಮಲಗಿದ್ದಾರೆ  ಎಲ್ಲಿ ನೋಡಿದರೂ ಸೀತದೇವಿ ಕಾಣಲಿಲ್ಲ.  ಹನುಮಂತ ಬ್ರಹ್ಮಚಾರಿ.  ಧರ್ಮ ಸಂಕಟ ಆಯಿತು.  ಧರ್ಮಲೋಪ ಬಂತು  ಅಂತ ಯೋಚನೆ ಮಾಡಿದರು. ಅವರಲ್ಲೆ ಅಂದುಕೊಂಡರು ಕಣ್ಣಿನಲ್ಲಿ ನೋಡಿದೆ ಮನಸ್ಸು ನೋಡಿಲ್ಲ.  ಆದುದರಿಂದ ನನಗೆ ಯಾವ ದೋಷವೂ ಇಲ್ಲ ಅಂತ ಯೋಚನೆ ಮಾಡುತ್ತಾರೆ.  ಅಂತಃಪುರದಲ್ಲಿ ಎಲ್ಲಾಕಡೆ ನೋಡುತ್ತಾರೆ.  ಎಲ್ಲೂ ಸೀತೆ ಕಾಣಿಸುವದಿಲ್ಲ.  ನಾನು ಬಂದಿದ್ದು ಶ್ರಮವಾಯಿತಲ್ಲ ಅಂತ ಯೋಚನೆ ಮಾಡುತ್ತಾರೆ.  ಜೀವನದಲ್ಲಿ ದುಃಖ ಬರುತ್ತೆ.  ಕುಗ್ಗಬಾರದು  ಹತಾಶೆಗೊಳ್ಳಬಾರದು.  ದ್ಯೆರ್ಯದಿಂದ ಮುನ್ನುಗ್ಗಬೇಕು.  ಸಂಪಾತಿಗೆ ರೆಕ್ಕೆ ಸುಟ್ಟುಹೋದಾಗ ರಾಮನ ಕಥೆ ಕೇಳಿ ರೆಕ್ಕೆ ಚಿಗುರತ್ತೆ.  ಸಂಪಾತಿ ಮೇಲೆ ಹಾರಿಹೋದಾಗ ಸೀತಾದೇವಿ ಕಾಣಿಸಿದಳು.  ಇದು ಹನುಮಂತನಿಗೆ ಗೊತ್ತಿತ್ತು.  ಸೀತಾದೇವಿ ಆತ್ಮಹತ್ಯೆ ಮಾಡಿಕೊಳ್ಳುವಿದಕ್ಕೆ ಸಾದ್ಯವಿಲ್ಲ ಯಾಕೆಂದರೆ -  ೧. ಅವಳು ವ್ಯೆದೇಹಿ.  ವಿದೇಹ ರಾಜನ ಮೊಮ್ಮಗಳು.  ವಿದೇಹರಾಜ ಜನಕರಾಜನ ತಂದೆ ಮತ್ತು ವ್ಯೆರಾಗ್ಯ ಶಿಖಾಮಣಿ.  ದೇಹದಮೇಲೆ ವ್ಯಾಮೋಹವೆ ಇಲ್ಲದ ರಾಜ.  ದೇಹತ್ಯಾಗ ಮಾಡುವುದಕ್ಕೆ ಸಾದ್ಯವೇ ಇಲ್ಲ.  ೨. ಅವಳು ಮ್ಯೆಥಿಲಿ.  ಮಿಥಿಲ ವಂಶದಲ್ಲಿ ಬಂದಿದ್ದಾಳೆ.  ೩.ಜನಕಾತ್ಮಜ - ಜನಕರಾಜನ ಮಗಳು.  ಮಹಾ ಜ್ಞಾನಿ ಅವನು.  ಋಷಿಗಳ ಹತ್ತಿರ ಪಾಠ ಶ್ರವಣ ಮಾಡುತ್ತಿದ್ದಾಗ ಮಿಥಿಲ ಪಟ್ಟಣಕ್ಕೆ ಬೆಂಕಿ ಬಿದ್ದಾಗ  ಎಲ್ಲಾ ಓಡಿದರೂ, ಅವನು ಹೋಗಲಿಲ್ಲ.   ಯಾವುದರಲ್ಲೂ ವ್ಯಾಮೋಹವಿರಲಿಲ್ಲ.  ಹೀಗೆ ಯೋಚಿಸಿದರು ಹನುಮಂತದೇವರು.   ಸೀತಾದೇವಿ ಕಾಣಲಿಲ್ಲ ಅಂತ ನಾನು ಪ್ರಾಣತ್ಯಾಗ ಮಾಡಿದರೆ ರಾಮ ಪ್ರಾಣತ್ಯಾಗ ಮಾಡುತ್ತಾನೆ.  ಆಮೇಲೆ ಲಕ್ಷ್ಮಣ, ಭರತ, ಶತ್ರುಘ್ಣ ಪ್ರಾಣ ತ್ಯಾಗ ಮಾಡುತ್ತಾರೆ.  ಆಮೇಲೆ ಕಪಿಗಳು ಪ್ರಾಣತ್ಯಾಗ ಮಾಡುತ್ತವೆ.  ಇದಕ್ಕೆಲ್ಲಾ ನಾನೊಬ್ಬನೆ ಕಾರಣನಾಗುತ್ತೀನಿ ಅಂತ ಯೋಚನೆ ಮಾಡುತ್ತಾನೆ ಹನುಮಂತ.  ಇದು ಸರಿಯಲ್ಲ, ನಾನು ತಪಸ್ಸು ಮಾಡುತ್ತೀನಿ ಅಂತ ಯೋಚಿಸಿದ.  ಸಮಯವನ್ನು ಎದುರಿಸಬೇಕು, ಬದುಕಬೇಕು ಅಂತ ಹನುಮಂತ ಯೋಚನೆ ಮಾಡುತ್ತಾನೆ.  ರಾವಣನನ್ನು ರಾಮನಿಗೆ ಒಪ್ಪಿಸಿಬಿಟ್ಟರೆ ಆಗ ರಾಮ ಎಲ್ಲರನ್ನು ಸಂಹಾರ ಮಾಡುತ್ತಾನೆ ಅಂತ ಯೋಚಿಸುತ್ತಾನೆ.  ಹೀಗೆಲ್ಲ ಚಿಂತಿಸಿ ಹನುಮಂತ ಇನ್ನೊಂದು ಬಿಟ್ಟಿದ್ದ ಸ್ಥಳ ಅಶೋಕವನ ನೋಡುತ್ತಾನೆ.  ಎಲ್ಲಾ ದೇವತೆಗಳಿಗೆ ನಮಸ್ಕಾರ ಮಾಡುತ್ತಾನೆ.  ೮ ವಸುಗಳು, ೧೧ ರುದ್ರರು, ೧೨ ಆದಿತ್ಯರು, ೨ ಅಶ್ವಿನಿ ದೇವತೆಯರು.  ಒಟ್ಟು ೩೩ ದೇವತೆಯರು.  ಇವರು ಕಾರ್ಯಸಿದ್ದಿ ದೇವತೆಗಳು. ಈ ದೇವತೆಗಳನ್ನು ಸ್ಮರಣೆ ಮಾಡಿದರೆ ನಮ್ಮ  ಕಾರ್ಯ ಕ್ಯೆಗೂಡತ್ತೆ ಅಂತ ತೋರಿಸಿಕೊಟ್ಟಿದ್ದಾರೆ ಹನುಮಂತ ದೇವರು.  ರಾಮನಿಗು ನಮಸ್ಕಾರ ಮಾಡುತ್ತಾರೆ.  ಅಶೋಕವನದಲ್ಲಿ ಶಿಂಶುಪ ವೃಕ್ಷದಮೇಲೆ ಕೂತುಕೊಂಡು ಸೀತಾದೇವಿಯನ್ನು  ನೋಡಿದರು.  ಹೇಗಿದ್ದಾರೆ ಸೀತಾದೆವಿ ಅಂತ ಹೇಳುತ್ತಾರೆ.  ಉಪವಾಸಮಾಡಿ ಕೋಲು ಇದ್ದಾಗೆ ಇದ್ದಾರೆ.  ಸರೋವರದಲ್ಲಿ ಪದ್ಮಗಳಿಲ್ಲದ ಹಾಗೆ ಇದ್ದಾರೆ.  ದುಃಖದಿಂದ ಅಳುತ್ತಾ ಇದ್ದಾರೆ.  ಒಂದು ಜಡೆ ಹಾಕಿಕೊಂಡಿದ್ದಾರೆ.  (ಹೆಣ್ಣುಮಕ್ಕಳು ಮೂರು ಜಡೆ ಹಾಕಿಕೊಳ್ಳಬೇಕು).  ಜಿಂಕೆಯಮರಿ ಜಿಂಕೆಯ ಗುಂಪಿನಿಂದ ತಪ್ಪಿಸಿಕೊಂಡು ನಾಯಿಗಳು ಮುತ್ತಿಗೆ ಹಾಕಿದಂತೆ ಇದ್ದಾರೆ. ಧೀನಳಾಗಿ ಕೃಶಳಾಗಿ ಇದ್ದಾಳೆ.

ರಾಮನಿಗೆ ಪರಿತಪಿಸುವದಿಕ್ಕೆ ನಾಲಕ್ಕು ಕಾರಣಗಳು.  ೧.ಸ್ತ್ರೀ ಎನ್ನುವ ಕಾರಣ್ಯ. ೨. ಅನುಸಂಶೀನ ೩. ಶೋಕೇನ - ನನ್ನ ಜೊತೆ ಇದ್ದವಳು  ೪. ಅತ್ಯಂತ ಪ್ರೀತಿಪಾತ್ರಳಾದವಳು  (ಧರ್ಮ ಕಾರ್ಯಕ್ಕೆ ಪತಿ ಇರಬೇಕು.  ಜೊತೆಯಲ್ಲಿ ಗಂಡನಿರುವದೆ ದೊಡ್ಡ ಅಲಂಕಾರ)  ಎಲ್ಲಾ ಕಡೆ ವೇದಮಂತ್ರ ಘೋಷಣೆಗಳು ಕೇಳಿಸುತ್ತಾ ಇವೆ. ಪುಲಸ್ತ್ಯ ಋಷಿಗಳ ಮೊಮ್ಮಗ ರಾವಣ.  ಅವನು ಬ್ರಹ್ಮ ರಾಕ್ಷಸ. ಸೀತಾದೇವಿಗೆ ಅವನು ಬರೋದು ಗೊತ್ತಿತ್ತು  ತಲೆ ಕೆಳಗೆ ಮಾಡಿ ಮಂಡಿ ಜೋಡಿಸಿಕೊಂಡು  ಸೀತೆ ಕುಳಿತುಕೊಂಡಿದ್ದಳು.  ಆ ಭಂಗಿ ಅಶುಭವಾದ ಭಂಗಿ.  ರಾಹು ಬಂದಹಾಗೆ ರಾವಣ ಬರುತ್ತಾನೆ.  ಗರ್ವದಿಂದ ಮಾತಾಡುತ್ತಾನೆ.  ರಾಕ್ಷಸರಿಗೆ ಒಂದು ಧರ್ಮವಿದೆ  ಪರಸ್ತ್ರೀ ಸಂಗ ಮಾಡುವದೇ ನಮ್ಮ ಧರ್ಮ ಅಂತ ಹೇಳುತ್ತಾನೆ.  ನಿನ್ನನ್ನು ನಾನು ಸ್ಪರ್ಶ ಮಾಡುವದಿಲ್ಲ ಅಂತ ಹೇಳುತಾನೆ.  ಸತ್ಯಧರ್ಮ ತೀರ್ಥರು ಇದರ ಒಳಗುಟ್ಟನ್ನು ಹೇಳುತ್ತಾರೆ.    ಒಮ್ಮೆ ರಾವಣ  ಗುಂಜ ಎಂಬ ಹೆಣ್ಣನ್ನು ಬಲಾತ್ಕಾರ ಮಾಡಿದಾಗ  ಅವಳು ರಾವಣನಿಗೆ ಪರಸ್ತ್ರೀ ಸ್ಪರ್ಶ ಮಾಡಿದರೆ ನಿನ್ನ ತಲೆ ಹೋಳಾಗಿ ಹೋಗಲಿ ಅಂತ ಶಾಪ ಕೊಟ್ಟಿರುತ್ತಾಳೆ.  ರಾವಣ ಸೀತಾದೇವಿಗೆ ನೀನು ಸ್ತ್ರೀ ರತ್ನ, ನಿನಗೆ ಎಲ್ಲಾ ಸುಖಸಿಗುವುದು, ವಿಧವಿಧವಾದ ಆಭರಣಗಳೂ ಸಿಗುತ್ತದೆ, ನನ್ನ ರಾಜ್ಯದಲ್ಲಿ ಎಲ್ಲವೂ ಸಿಗುತ್ತದೆ, ನನ್ನನ್ನು ವಿವಾಹವಾಗು ಅಂತ ಪೀಡಿಸುತ್ತಾನೆ.  ನಿನ್ನನ್ನು ನೋಡಿದರೆ ಚತರ್ಮುಖ ಬ್ರಹ್ಮನೂ ಕೂಡ ನಿನ್ನನ್ನು ವಿವಾಹ ವಾಗುತ್ತಾನೆ ಅಂತ ಹೇಳುತ್ತಾನೆ.  ಇದನ್ನು ಸತ್ಯಧರ್ಮತೀರ್ಥರು  ಅಷ್ಟು ಸೌಂದರ್ಯ ಅವಳಲ್ಲಿ ಇದೆ ಅಂತ ಪರಿಗಣಿಸಬೇಕು ಅಂತ ವ್ಯಾಖ್ಯಾನ ಮಾಡಿದ್ದಾರೆ.  ಕೊನೆಗೆ ನಿನ್ನ ಕಾಲಿಗೆ ಬೀಳುತ್ತೀನಿ ಅಂತ ಹೇಳುತ್ತಾನೆ.  ಆಗ ಅವನ ಮಂತ್ರಿಗಳು  ಈ ಮಾತು ಸರಿಯಲ್ಲ.  ನೀನು ರಾಮನ ವೇಶ ಹಾಕಿಕೊಂದು ಅವಳ ಹತ್ತಿರ ಹೋಗು ಅಂತ ಉಪದೇಶ ಮಾಡುತ್ತಾರೆ.  ರಾವಣ ಹೇಳುತ್ತಾನೆ ನಾನು ರಾಮನ ವೇಶ ಹಾಕಿಕೊಂಡು ಆಗಲೆ ಹೋಗಿದ್ದೇನೆ.  ರಾಮಚಂದ್ರನ ಪಾತ್ರಧಾರಣೆ ಮಾಡಿದಾಗ ವಿಷ್ಣು ಶಕ್ತಿ ಇತ್ತು, ರಾಮನ ವ್ಯಕ್ತಿತ್ವ ಬಂತು ಅಂತ ಹೇಳುತ್ತಾನೆ. ಸೀತಾದೇವಿ ಹುಲ್ಲುಕಡ್ಡಿ ನೋಡಿ ಮಾತಾಡುತ್ತಾಳೆ.  ಇದನ್ನು ಸತ್ಯಧರ್ಮತೀರ್ಥರು ಹೀಗೆ ವ್ಯಾಖ್ಯಾನ ಮಾಡಿದ್ದಾರೆ.  ಪರಪುರುಷನ ಹತ್ತಿರ ಮಾತಾಡುವಾಗ  ಕಣ್ಣೆತ್ತಿ ನೋಡಿ ಮಾತಾಡಬಾರದು.  ನೀನು ಈ ಹುಲ್ಲುಕಡ್ಡಿಯ ಸಮಾನ.  ರಾಮಚಂದ್ರ ನಿನ್ನನ್ನು ಸಂಹಾರ ಮಾಡುತ್ತಾನೆ.    ತೇನವಿನಾ ತೃನುವಿನ ನಚಲತೆ ಅಂತ ನಗುನಗುತ್ತಾ ಮಾತಾಡಿದಳು.  ನೀನು ಅಯೋಗ್ಯ.  ನಾನು ಒಳ್ಳೆ ಕುಲದಲ್ಲಿ ಹುಟ್ಟಿದವಳು. ನನ್ನ ತಂದೆ ದೊಡ್ಡ ಜ್ಞಾನಿ.  ನಾನು ನಿನಗೆ ಯೋಗ್ಯಳಲ್ಲ.  ಯೋಚನೆ ಮಾಡು.  ರಾಮಚಂದ್ರನ ಜೊತೆ ಮ್ಯೆತ್ರಿ ಮಾಡಿಕೊ.  ಅವನ ಭಾಣ ಬಹಳ ಶ್ರೇಷ್ಠವಾದದ್ದು.  ನನ್ನ ಮ್ಯೆ ಉರಿದುಹೋಗುತ್ತಿದೆ.  ಎಷ್ಟು ದ್ಯೆರ್ಯ ನಿನಗೆ.  ನಿನ್ನನ್ನು ಸಂಹರಿಸದೆ ಬಿಟ್ಟುಬಿಡುತ್ತಿದ್ದೇನೆ.  (ಏನು ಮಾಡಿದರೂ ಗಂಡ ಸುಮ್ಮನೆ ಇದ್ದರೆ ಹೆಂಡತಿಗೆ ಖುಷಿ)  ರಾವಣನಿಗೆ ತುಂಬಾ ಕೋಪ ಬಂತು. ಅವನು ರಾಕ್ಷಸಿರನ್ನು ಕರೆದು ಸೀತೆಯನ್ನು ಪರಿವರ್ತಿಸಿ ಎಂದು ಮತ್ತು ಅವಳು ನಿಮ್ಮ ಮಾತು ಕೇಳದಿದ್ದರೆ ಅವಳನ್ನು ಸುಟ್ಟುಹಾಕಿಬಿಡಿ ಎಂದು ಹೇಳಿ ಹೊರಟುಹೋದ.  ಏಕಜಟೆ ರಾಕ್ಷಸಿ - ಪುಲಷ್ಯ ವಂಶದ ವಿಷ್ರವನ ಮಗ ರಾವಣ. ಅವನು ಹರಿಜಟ -  ೩೩ ದೇವತೆಗಳನ್ನ ಗೆದ್ದಿದ್ದಾನೆ.  ಅವನು ವಿಕಟ- ದೇವತೆಗಳು ಅವನನ್ನು ಗೆಲ್ಲಲೇ ಇಲ್ಲ, ಅಂತಃಪುರದಲ್ಲಿ ವಾಸಮಾಡುವ ಯೋಗ,  ರಾವಣನ್ನು ವಿವಾಹ ಮಾಡಿಕೊ,  ರಾಮ ರಾಮ ಅಂತ ಯಾಕೆ ಒದ್ದಾಡುತ್ತಿದ್ದೀಯಾ ಅಂತ ಹೇಳುತ್ತಾಳೆ.  ಆಗ ಸೀತೆ ಪಾತಿವ್ರತ್ಯ ಉಳಿಸಿಕೊಳ್ಳುವ ಸ್ತ್ರೀ,  ನೀವು ನನ್ನ ದೇಹವನ್ನು ತಿಂದುಹಾಕಿ, ನಾನು ಮಾತ್ರ ಅವನನ್ನು ವಿವಾಹವಾಗುವುದಿಲ್ಲ ಅಂತ ಉತ್ತರಿಸುತ್ತಾಳೆ.  ನನ್ನ ಗಂಡ ನನ್ನ ಗುರು ಅಂತ ಹೇಳುತ್ತಾಳೆ.  ಆಮೇಲೆ ಹೀಗೆ ನಿದರ್ಶನ ಕೊಡುತ್ತಾಳೆ.   ನಾನು  ಇಂದ್ರ/ಶಚಿ ಹೇಗೊ ಹಾಗೆ, ವಸಿಷ್ಟ/ಅರುಂದತಿ ಹೇಗೊ ಹಾಗೆ,  ರೋಹಿನಿ/ಚಂದ್ರ ಹೇಗೊ ಹಾಗೆ, ನಳ/ದಮಯಂತಿ ಹೇಗೊ ಹಾಗೆ, ಸಾವಿತ್ರಿ/ಸತ್ಯವಂತ ಹೇಗೊ ಹಾಗೆ ಅಂತ ಹೇಳಿಕೊಳ್ಳುತಾಳೆ.     ಆತ್ಮಹತ್ಯೆ ಯೋಚನೆ ಮಾಡುತ್ತಾಳೆ, ಮನುಷ್ಯ ಜನ್ಮಕ್ಕೆ ದಿಕ್ಕಾರ ಅಂತ ಹೇಳುತ್ತಾಳೆ.  ರಾವಣನನ್ನು ಎಡಗಾಲಿನಲ್ಲೂ ಸ್ಪರ್ಶ ಮಾಡುವದಿಲ್ಲ ಅಂತ ಹೇಳು ರಾವಣನಿಗೆ ಅಂತ ಸೀತೆ ಹೇಳುತ್ತಾಳೆ.    ನನ್ನ ಚ್ಛೇದನಮಾಡಿ, ತುಂಡು ತುಂಡು  ಮಾಡಿ ನಾನು ರಾವಣನನ್ನು ವಿವಾಹ ಮಾಡಿಕೊಳ್ಳುವದಿಲ್ಲ  ನನ್ನ ಗಂಡ ಬಂದೇ ಬರುತ್ತಾನೆ ಅಂತ ಸಮರ್ಥಿಸಿಕೊಳ್ಳುತ್ತಾಳೆ.  ತ್ರಿಜಟೆ ರಾಕ್ಷಸಳು ಬರುತ್ತಾಳೆ.  ವಯಸ್ಸಿನಲ್ಲಿ ವೃದ್ದಳು. ಪ್ರಭುದ್ದಳು  ಸೀತೆ ಮೇಲೆ ಪ್ರೀತಿ ಇತ್ತು.  ಅವಳು ಬೆಳಗ್ಗೆ ಬಿದ್ದ ಕನಸನ್ನು ಎಷ್ಟು ರೋಮಾಂಚನವಾಗಿತ್ತು ಅಂತ ಹೇಳುತ್ತಾಳೆ.    ಕನಸಿನ ಸಾರ - ಎಲ್ಲಾ ರಾಕ್ಷಸರ ನಾಶವಾಗಿದೆ.  ರಾಮಚಂದ್ರನಿಗೆ ಜಯವಾಗಿದೆ.  ವಿಸ್ತಾರವಾಗಿ ಹೇಳು ಅಂತ ಕೇಳುತ್ತಾರೆ.  ಕನಿಸಿನ ವಿವರ ಹೀಗಿತ್ತು.  "ಸಾವಿರಾರು ಹಂಸ ರಥ.  ಅದರಲ್ಲಿ ರಾಮ, ಲಕ್ಷ್ಮಣ.  ಶುಭ್ರವಾಗಿರುವ ರಾಮಚಂದ್ರ, ಶುಕ್ಲಾಂಬರವಾಗಿ ಸೀತಾದೇವಿ.  ಸಾಗರ ಮಧ್ಯದಲ್ಲಿ ಬಿಳಿಯಾದ ಪರ್ವತ.  ಆ ಪರ್ವತದಲ್ಲಿ ರಾಮನ ಜೊತೆ ಸೀತಾದೇವಿ ಕುಳಿತಿದ್ದಾಳೆ.  ಸತ್ಯಧರ್ಮತೀರ್ಥರು ಸಾಗರ  ಅಂದರೆ ಕ್ಷೀರಸಮುದ್ರ ಅಂತ ತಿಳಿಯಬೇಕೆಂದು ವ್ಯಾಖ್ಯಾನ ಮಾಡಿದ್ದಾರೆ.  ಭಗವಂತ ಶ್ವೇತದ್ವೀಪದಲ್ಲಿ ವಾಸ.  ದೊಡ್ಡದ ೪ ದಂತದ ಆನೆ.  ಅದರಲ್ಲಿ ರಾಮಚಂದ್ರ, ಸೀತಾದೇವಿ ಜೊತೆ ಬರುತಿದ್ದಾರೆ.  (ಸ್ವಪ್ನ ಶಾಸ್ತ್ರ: ಎತ್ತು, ಆನೆ, ಉಪ್ಪರಿಗೆ, ಪರ್ವತ ಕಾಣಿಸಿಕೊಂಡರೆ ಶುಭ ಸ್ವಪ್ನ)  ಪುಷ್ಪಕ ವಿಮಾನದಲ್ಲಿ ಸೂರ್ಯಮಂಡಲದಲ್ಲಿ  ಉತ್ತ್ತರದಿಕ್ಕಿಗೆ ಹೋಗುತ್ತಿದ್ದಾರೆ.  ಆ ರಾಮನ ಸ್ವರೂಪ ಹೇಗಿದೆ ಅಂದರೆ ಅವನನ್ನು ಗೆಲ್ಲುವಿದಕ್ಕೆ ಯಾರಿಗೂ ಸಾಧ್ಯವಿಲ್ಲ ಅಂತ ಕಾಣಿಸುತ್ತಿದ್ದಾನೆ.  ರಾವಣನೂ ಬಂದಿದ್ದಾನೆ. ಮ್ಯೆ ತುಂಬಾ ಎಣ್ಣೆ, ಕೆಂಪು ಬಟ್ಟೆ ಹಾಕಿ ಕೊಂಡಿದ್ದಾನೆ. ಕುಡಿತಾ ಇದ್ದಾನೆ(ಪಿಬನ್)  ಪುಷ್ಪಕ ವಿಮಾನದಿಂದ ಕೆಳಗೆ ಬಿದ್ದಿದ್ದಾನೆ.  ಒಬ್ಬ ಹೆಣ್ಣು ರಾವಣನನ್ನು ಎಳೆದುಕೊಂಡು ಹೋಗುತ್ತಾ ಇದ್ದಾಳೆ.  ಅವನ ತಲೆ ಬೋಳಾಗಿದೆ.  ರಾವಣನು ಕತ್ತೆಗಳು ಕಟ್ಟಿದ ರಥವನ್ನು ಹತ್ತುತ್ತಾ ಇದ್ದಾನೆ.  ರಥದಿಂದ ಕೆಳಗೆ ಇಳಿದು ಕತ್ತೆಯ ಮೇಲೆ ಹತ್ತಿ ದಕ್ಷಿಣ ದಿಕ್ಕಿಗೆ ಹೋಗುತ್ತಾ ಇದ್ದಾನೆ.  ಆವಾಗ ಕೆಳಗೆ ಬಿದ್ದು ಹೋಗಿದ್ದಾನೆ. ಗೊಬ್ಬರ ಹೊಂಡದಲ್ಲಿಬಿದ್ದು ಹೋಗಿದ್ದಾನೆ.  ಅವನ ಮೇಲೆ ವಸ್ತ್ರಗಳೆ ಇಲ್ಲ,  ಕೆಟ್ಟದಾಗಿ ಮಾತನಾದುತ್ತಿದ್ದಾನೆ.  ಅಂತ ನರಕ ಅನುಭವಿಸುತ್ತಾ ಇದ್ದಾನೆ.  ಕುಂಬಕರ್ಣ ಹಂದಿ ಮೇಲೆ, ಇಂದ್ರಜಿತ್ ಚೇಳಿನ ಮೇಲೆ ಕೂತುಕೊಂಡು ದಕ್ಷಿಣದಿಕ್ಕಿನಕಡೆ ಹೋಗುತ್ತಿದ್ದಾರೆ.  ಎಲ್ಲಾ ಗೋಪುರಗಳು ಸಾಗರದಲ್ಲಿ ಮುಳುಗುತ್ತಾ ಹೋಗುತ್ತಿವೆ.".  ಈ ಕನಸ್ಸು ಬೆಳಿಗಿನ ಜಾವದಲ್ಲಿ ಬಿದ್ದಿದ್ದರಿಂದ ಇದು ಸತ್ಯವಾಗಬಹುದು.  ಸೀತಾದೇವಿಯನ್ನು ಪೀಡಿಸಬೇಡಿ ಅಂತ ಹೇಳುತ್ತಾಳೆ.  ಇದನ್ನು ಕೇಳಿ ಸೀತಾದೇವಿಗೆ ಆಸೆ ಹುಟ್ಟಿತು.  (ಸೀತಾದೇವಿ ತ್ರಿಜಟೆಯನ್ನು ಕರೆದುಕೊಂದು ಹೋಗೋಣ.  ಅವಳ ಸ್ವಪ್ನದಿಂದ ನಾನು ಬದುಕಿದ್ದೀನಿ ಅಂತ ರಾಮನಿಗೆ ಹೇಳುತ್ತಾಳೆ.  ಅವಳೆ ಸುಭದ್ರೆಯಾಗಿ ಅವತಾರ ಮಾಡಿದಳು ಮುಂದೆ).  ಅಷ್ಟು ಹೊತ್ತಿಗೆ ಬೆಳಗಿನ ಜಾವವಾಗಿತ್ತು.  ರಾಕ್ಷಸರಿಗೆಲ್ಲಾ ನಿದ್ರೆ ಹತ್ತಿತ್ತು.  ಇದನ್ನೆಲ್ಲಾ ಹನುಮಂತದೇವರು ನೋಡಿದ್ದಾರೆ  ಹೇಗೆ ಹೋಗಿ ಸೀತಾದೇವಿಯನ್ನು ನೋಡಬೇಕೆಂದು ಯೋಚಿಸುತ್ತಾರೆ.  ರಾಮಚಂದ್ರನ ಕಥೆಯನ್ನು ಮೇಲೆ ಕೂತಿಕೊಂಡು ಹೇಳುವುದಿಕ್ಕೆ ಶುರುವು ಮಾಡಿದರು.    ಸೀತಾದೇವಿ ಮೇಲೆ ನೋಡಿ ಆನಂದವಾಗಿ ಹೋದಳಂತೆ.  ಯಾರಿರಬಹುದು ಅಂತ ಚಿಂತೆ ಮಾಡುತ್ತಾಳೆ.  ಹನುಮಂತದೇವರು ನಮಸ್ಕಾರ ಮಾಡಿ ಯಾರು ನೀವು? ಎಷ್ಟು ಸುಂದರವಾಗಿ ಇದ್ದೀರ  ನೀವು ಸೀತಾದೇವಿಯಾ? ಅಂತ ಕೇಳಿದಾಗ, ಹೌದು ಅಂತ ಸೀತಾದೇವಿ ಹೇಳುತ್ತಾಳೆ.  ದಶರಥನ ಹಿರಿಯ ಸೊಸೆ.  ನನ್ನ ಹೆಸರು ಸೀತೆ, ರಾಮನ ಹೆಂಡತಿ ಅಂತಾ ಹೇಳುತ್ತಾಳೆ.  ಆ ಮಾತಿನಲ್ಲೂ ಎಂತಾ ಸಂಸ್ಕಾರವಿದೆ ಅಂತ ತಿಳಿಯಬೇಕು.  ೧೨ ವರ್ಷ ಸಂಸಾರ ಮಾಡಿದ್ದೆ.  ೧೩ನೆ ವರ್ಷದಲ್ಲಿ ರಾಮನ ಚಿಕ್ಕಮ್ಮ ಕಾಡಿಗೆ ಕಳಿಸಿಕೊಟ್ಟಳು.    ಭರತನಿಗೆ ರಾಜ್ಯವನ್ನು ಬಿಟ್ಟುಕೊಡು ಅಂತ ನಾನು ಹೇಳಿದೆ.  ಭರತ ಅಳುತ್ತಾ ರಾಜ್ಯವನ್ನು ಕೇಳಿದ.  ದಶರಥನು ಅಳುತ್ತಾ ಇರುತ್ತಾನೆ.  ರಾವಣನನು ೨ ತಿಂಗಳು ಸಮಯ ಕೊಟ್ಟಿದ್ದಾನೆ.  ಸತ್ಯಧರ್ಮತೀರ್ಥರು ಇದು ವ್ಯಂಗ್ಯವಾದ ಮಾತು.  ಇದು ದ್ವನಿ ಕಾವ್ಯಾಂತ ವಾಖ್ಯಾನ ಮಾಡುತ್ತಾರೆ.  ಇದು ಶ್ಲೋಕದ ಸ್ವಾರಸ್ಯ.  ಸತ್ಯಧರ್ಮತೀರ್ಥರ ಅಭಿಪ್ರಾಯ ಹೀಗಿದೆ.  ಹನುಮಂತದೇವರು  "ನಾನು ರಾಮನ ಸಂದೇಶ ತಂದಿದ್ದೀನಿ ಅಂತ ಹೇಳಿ ಸಮಾದಾನ ಮಾಡುತ್ತಾನೆ.  ನನ್ನ ಮೇಲೆ ಸ್ವಲ್ಪ ಕಾರುಣ್ಯ ತೋರಿ"  ನಿನ್ನನ್ನು ಹೇಗೆ ನಂಬಲಿ ಅಂತ ಸೀತೆ ಕೇಳುತ್ತಾಳೆ.  ನಾನು ಹನುಮಂತ ಅಂತ ಹೇಳುತ್ತಾನೆ.  ನಿನ್ನನ್ನು ನೋಡಿದರೆ ಪ್ರೀತಿ ಬರುತ್ತೆ.  ರಾಮನ ವ್ಯಕ್ತಿತ್ವ ನಿರೂಪಣೆ ಮಾಡು ಅಂತ ಸೀತೆ ಕೇಳುತ್ತಾಳೆ.  ಹನುಮಂತ ಹೇಳುತ್ತಾನೆ " ರಾಮನು ವಾನರ ಸ್ಯೆನ್ಯ ಸುಗ್ರೀವನ ಜೊತೆ ಇದ್ದಾನೆ  ರಾಮನ ಕಣ್ಣು ಕಮಲದಂತೆ ಅಂತ ರಾಮನ ರೂಪವನ್ನು ವರ್ಣನೆ ಮಾಡುತ್ತಾನೆ.  ರಾಮನದು ಸಾತ್ವಿಕವಾದ ವ್ಯಕ್ತಿತ್ವ  ರಾಮನದು ಸೂರ್ಯ ವಂಶ.  ಎಲ್ಲರನ್ನೂ ರಕ್ಷಣೆ ಮಾಡುತ್ತಾನೆ.  ರಾಮಚಂದ್ರನ ವರ್ಣನೆ ಕಣ್ಣಿನಿಂದಾ ಮಾಡುತ್ತಾನೆ.  ಎಲ್ಲಾ ಅವಯವ  ವಿವರಣೆ ಮಾಡುತ್ತಾನೆ.  ಪರಸ್ತ್ರೀಯರನ್ನು ಕಣ್ಣೆತ್ತಿ ನೋಡುವದಿಲ್ಲ, ಸಜ್ಜನರಿಗೆ ಉಪಕಾರ ಮಾಡುತ್ತಿರುತ್ತಾನೆ, ಸತ್ಕರ್ಮ ಪ್ರಚಾರ ಮಾಡುತ್ತಾನೆ, ಶೀಲ ಸಂಪನ್ನ ಯಜುರ್ವೇದ ಶಾಖೆ, ವಿನೀತ  ಅಂತ ಹೇಳುತ್ತಾನೆ.  (ಶ್ರೀನಿವಾಸ, ಕೃಷ್ಣ ಅವರ ಶಾಖೆನು ಯಜುರ್ವೇದ). ಹನುಮಂತ ನಾನು ರಾಮನ ದೂತ ಅಂತ ಹೇಳಿಕೊಳ್ಳುತ್ತಾನೆ.    ನಾನು ದಕ್ಷಿಣ ದಿಕ್ಕಿಗೆ ಬಂದಿದ್ದೀನಿ  ನಾನು ಕೇಸರಿಯ ಮಗ.  ೧೦೦ ಯೋಜನೆ ಸಮುದ್ರ ದಾಟಿಕೊಂದು ನಿನಗೋಸ್ಕರ ಬಂದಿದ್ದೀನಿ.    ತುಂಬಾ ದುಃಖದಿಂದಿದ್ದಾನೆ ರಾಮಚಂದ್ರ. ಗೆಡ್ಡೆ ಗೆಣಸು ತಿಂದುಕೊಂಡು ಬದುಕಿದಾನೆ ನಿನಗೋಸ್ಕರ. ಯಾವಾಗಲೂ ನಿನ್ನ ಸ್ಮರಣೆಯೆಲ್ಲೇ ಕಾಲ ಕಳೆಯುತ್ತಿದ್ದಾನೆ.  ಒಂದು ಉಂಗರ ನಿನಗೋಸ್ಕರವಾಗಿ ರಮಚಂದ್ರ ಕೊಟ್ಟಿದ್ದಾನೆ ಅಂತ ಹೇಳಿ ಉಂಗರ ಕೊಡುತ್ತಾನೆ.  ೪ ಸರ್ತಿ ಸುವರ್ಣ ಪದವನ್ನು ಉಪಯೋಗಿಸಿದ್ದಾರೆ.  ಅದರ ವ್ಯಾಖ್ಯಾನ ಸತ್ಯಧರ್ಮ ತೀರ್ಥರು ಹೀಗೆ ಮಾಡಿದ್ದಾರೆ. ಮೊದಲನೆಯದು ಬಂಗಾರ ಉಂಗರ.    ಇನ್ನೊಂದು ಸುವರ್ಣ ಒಳ್ಳೆ ವರುಣಬಣ್ಣದ ಉಂಗರ. ಮೂರನೆ ಸುವರ್ಣ  ಎಷ್ಟು ತೂಕದ್ದು ಉಂಗರ.  ೯ ಗುಲಗಂಜಿ ತೂಕವಿರುವ ಉಂಗರ. ೪ನೇ ಬಾರಿ ಸುವರ್ಣ ಎರಡು ಅಕ್ಷರವಿರುವ ಉಂಗರ.  ಶ್ರೀ ರಾಮ ಅಂತ ಅಕ್ಷರವಿರುವ ಉಂಗರ.  ಸೀತಾದೇವಿ ಉಂಗರವನ್ನು ತನ್ನ ತಲೆಯ ಮೇಲೆ ಇಟ್ಟುಕೊಳ್ಳುತ್ತಾಳೆ.  ಸತ್ಯಾರ್ಥತೀರ್ಥರು ರಾಮನ ಅನುಗ್ರಹವಾಗಳೆಂದು ತಲೆಯಮೇಲೆ ಇಟ್ಟ್ಟಿಕೊಳ್ಳುತ್ತಾಳೆ ಅಂತ ವ್ಯಾಖ್ಯಾನ ಮಾಡಿದ್ದಾರೆ.  ಸೀತಾದೇವಿ ಹನುಮಂತನಿಗೆ ಚೂಡಮಣಿಯನ್ನು ರಾಮನಿಗೆ ತಳುಪಿಸು ಎಂದು ಹೇಳಿ ಕೊಡುತ್ತಾಳೆ.  ವಾಯಸ ವೃತ್ತಾಂತ ಹೇಳುತ್ತ್ತಾಳೆ.  ರಾಮನು ಶತ್ರುವನ್ನು ಗೆದ್ದು ವೀರನಾಗಿ ನಿನ್ನನ್ನು ಕರೆದುಕೊಂಡು ಹೋಗುತ್ತಾನೆ ಅಂತ ಹನುಮಂತ ಹೇಳುತ್ತಾನೆ.  ಎಲ್ಲಾ ಕಪಿಗಿಳಿಗಿಂತಾ ನಾನೆ ಕೊನೆಯವನು ಅಂತ ಹೇಳಿಕೊಳ್ಳುತ್ತಾನೆ.  ಸೀತಾದೇವಿಗೆ ನಮಸ್ಕಾರ ಮಾಡಿ ಹೊರಡುತ್ತಾನೆ.  ರಾವಣನನ್ನು ಬೇಟಿಮಾಡಿ ಸಾಮರ್ಥ್ಯ ತೋರಿಸಬೇಕೆಂದುಕೊಂಡು ಹೊರಡುತ್ತಾನೆ.  ನಿಮ್ಮ ಹಾದಿಯು ಮಂಗಳಕರವಾಗಿರಲಿ ಅಂತ ಆಶೀರ್ವಾದ ಮಾಡಿ  ಕಳಿಸಿಕೊಟ್ಟಳು ಸೀತಾದೇವಿ. ನನ್ನ್ನ ಪರಾಕ್ರಮ ತೋರಿಸಿ ರಾವಣನನ್ನು ನೋಡಬೇಕು ಅಂತ ಚಿಂತುಸುತ್ತಾನೆ ಹನುಂತದೇವರು.  ಮರಗಳನ್ನು ಮುರಿದು ಹಾಕುತ್ತಿರುವಾಗ ಅರೆನಿದ್ರೆಯಲ್ಲಿರುವ ರಾಕ್ಷಸರಿಗೆ ಗಾಬರಿಯಾಗತ್ತೆ.  ರಾಮನಾಮ ಹೇಳಿಕೊಂಡು ಮರಗಳನ್ನು ಮುರೀತಾಇದ್ದರು.  ರಾಮ, ರಾಮ, ರಾಮ ಎಂದು ಮೂರುಬಾರಿ ಸ್ಮರಣೆ ಮಾಡಿದರೆ ಅದು ಸಹಸ್ರನಾಮದಷ್ಟು  ಪುಣ್ಯವಾಗುವುದು.  ರ - ಎರಡನೆ ಅಕ್ಷರ; ಮ - ೫ನೆ ಅಕ್ಷರ.  ರಾಮ = ೨*೫ = ೧೦.  ರಾಮ, ರಾಮ, ರಾಮ = ೧೦*೧೦*೧೦ = ೧೦೦೦.  ಈ ಅರ್ಥದಲ್ಲಿ ಹೇಳಿರುವದು ರುದ್ರದೇವರು.  ರಾವಣನು ಕಿಂಕರರನ್ನು(ರಾಕ್ಷಸರನ್ನು) ಕಳಿಸಿಕೊಟ್ಟ.  ರಾವಣನಿಗೆ ಸಮಾನಾದ ಶಕ್ತಿ ಇದ್ದವರು ೮೦ ಕೋಟಿ ಜನ ಬಂದಿದ್ದರು ಮತ್ತೆ ೮೦,೦೦೦ ಮುಖ್ಯಸ್ತರರನ್ನ ಕಳುಹಿಸಿದ್ದಾನೆ ರಾವಣ.  ಎಲ್ಲರನ್ನ ಹೊಡೆದುಹಾಕುತ್ತಿದ್ದಾರೆ ಹನುಮಂತದೇವರು.  ಅಗ್ನಿಯಂತೆ ಇದ್ದರು.  ಎಲ್ಲರನ್ನು ಸುಟ್ಟುಹಾಕಿದ್ದಾರೆ ಹನುಮಂತ.  ಕೋಸಲ ದೇಶದ ರಾಮಚಂದ್ರನ ದಾಸ  ರಾವಣನಂತ ಸಾವಿರ ಜನರು ಬಂದರೂ ನನ್ನ ಎದುರಿಗೆ ಗೆಲ್ಲಲಾರರು.  ರಾಕ್ಷಸರನ್ನು ಸಂಹಾರ ಮಾಡಿ ಈ ಸಂದೇಶ ಹೇಳುತ್ತಾನೆ.  ಮಂತ್ರಿಗಳ ಎಲ್ಲಾ ಮಕ್ಕಳರನ್ನು ಅನಾಯಾಸವಾಗಿ ಸಂಹಾರ ಮಾಡುತ್ತಾನೆ.   ರಾವಣನ ಅರ್ಧ ಸ್ಯೆನ್ಯವನ್ನು ನಾಶ ಮಾಡುತ್ತಾನೆ.  ರಾವಣನ ಮಕ್ಕಳು ಅಕ್ಷಯ ಕುಮಾರ, ಇಂದ್ರಜಿತ್ ರಾವಣನಷ್ಟೆ ಬಲಶಾಲಿಗಳು. ಹರಿ ಸಂಕಲ್ಪವೇ ನನ್ನ ಸಂಕಲ್ಪ ಎಂದು ಅಕ್ಷಯ ಕುಮಾರನನ್ನು ಸಂಹಾರ ಮಾಡಿ ಇಂದ್ರಜಿತನ್ನು ಬಿಟ್ಟುಬಿಡುತ್ತಾರೆ ಹನುಮಂತದೇವರು.  ಈಂದ್ರಜಿತ್ತನ್ನ ಕಪಿಗಳು ನೋಡಬೇಕೆಂದು ಆಸೆ ಇತ್ತು.  ಅದಕ್ಕೆ ಅವನನ್ನು ಬಿಟ್ಟಿದ್ದು.  ಇಂದ್ರಜಿತ್ ಬ್ರಹ್ಮಾಸ್ತ್ರವನ್ನು ಪ್ರಯೋಗ ಮಾಡುತ್ತಾನೆ.  ಹನುಮಂತ ಬ್ರಹ್ಮಾಸ್ತ್ರಕ್ಕೆ ಬೆಲೆಕೊಟ್ಟು ಅದರಲ್ಲಿ ಸಿಕ್ಕಿಹಾಕಿಕೊಂಡಹಾಗೆ ನಟನೆ ಮಾಡುತ್ತಾರೆ.  ಬ್ರಹ್ಮದೇವರ ವರಗಳನ್ನು ಉಲ್ಲಂಗಿಸಿದ್ದಕ್ಕೆ ಈ ಗೌರವ ತೋರಿಸುತ್ತಾರೆ ಹನುಮಂತದೇವರು.  ರಾಕ್ಷಸರು ಹನುಮಂತನನ್ನು ಹಗ್ಗದಿಂದ ಕಟ್ಟಿಹಾಕಿ  ಅಪ್ರಮೇಯ ಕಪಿಯನ್ನು ರಾವಣನ ಮುಂದೆ ನಿಲ್ಲಿಸುತ್ತಾರೆ.  ಹನುಮಂತದೇವರು ರಾವಣನ್ನ ಮಲಿಗದಾಗ ೧ ತಲೆ, ಸಿಟ್ಟು ಬಂದಾಗ ೧೦ ತಲೆ ಎಂತಾ ಅದ್ಭುತ ಅಂತ ಹೊಗಳುತ್ತಾರೆ.  ತನ್ನ ಸೇವಕರಿಂದ ಯಾರವನು ಅಂತ ತೀಳಿದುಕೊಳ್ಳುತ್ತಾನೆ ರಾವಣ.  ಹನುಮಂತ ರಾಕ್ಷಸರಿಗೆ ನಾನೆ ಬಂದಿದ್ದೀನಿ ನಿಮ್ಮ ಒಡೆಯನನ್ನು ನೋಡೊದಿಕ್ಕೆ ಅಂತ ಹೇಳಿ, ಯಾವ ಬ್ರಹ್ಮಾಸ್ತ್ರವು ನನ್ನನ್ನು ಏನು ಮಾಡುವದಿಲ್ಲ, ನಾನು ರಾಮನ ಸೇವಕ ಅಂತ ಹೇಳುತ್ತಾನೆ.  ರಾವಣ ಸಂಹಾರ ಮಾಡಿ ಅವನನ್ನು ಅಂತ ಹೇಳುತ್ತಾನೆ.  ವಿಭೀಷಣ ಬಂದು ದೂತನನ್ನು ಸಂಹಾರ ಮಾಡುವುದು ಧರ್ಮವಲ್ಲ, ಅದು ರಾಜಧರ್ಮಕ್ಕೆ ವಿರೋದವಾದದ್ದು, ಅವನ ಬಾಲಕ್ಕೆ ಬೆಂಕಿ ಹಚ್ಚಿ ಅಂತ ಹೇಳುತ್ತಾನೆ. ವಸ್ತ್ರವನ್ನು ತಂದು ಎಣ್ಣೆಯಲ್ಲಿ ಅದ್ದಿ ಬಾಲಕ್ಕೆ ಕಟ್ಟುವುದಕ್ಕೆ ಶುರುವು ಮಾಡುತ್ತಾರೆ.  ಆಗ ಬಾಲ ಉದ್ದವಾಗಿ ಬೆಳೆದುಕೊಂಡು ಹೋಗತ್ತೆ.  ಎಷ್ಟು ಬಟ್ಟೆ ಸುತ್ತಿದರೂ ಸಾಕಾಗುವದೆ ಇಲ್ಲ.  ಬೆಂಕಿ ಹಚ್ಚುತ್ತಾರೆ.  ಹನುಮಂತ ಮೇಲೆ ಹಾರಿಹೋಗಿ ಇದೇ ಲಂಕಾ ಪಟ್ಟಣವನ್ನು ದಹನ ಮಾಡುತ್ತಾ ಹೋಗುತ್ತಾನೆ.  ಇದರ ಸಂದೇಶ ಏನೆಂದರೆ ಮಾಘ ಮಾಸದಲ್ಲಿ ಲಂಕ ದಹನ ಮಾಡಿದ್ದು.  ಕಾರ್ತೀಕ ಮಾಸದಲ್ಲಿ ದೀಪೋತ್ಸವ ಮಾಡಿರಲಿಲ್ಲ, ಆದುದರಿಂದ ಮಾಘ ಮಾಸದಲ್ಲಿ ದೀಪೋತ್ಸವ ಮಾಡಿ ಲಂಕಾ ಪಟ್ಟಣವನ್ನು ದೇವರಿಗೆ ಅರ್ಪಣೆ ಮಾಡುತ್ತಾರೆ ಹನುಮಂತದೇವರು. ದೇವರ ಕೋಣೆ ಮದ್ಯಮ ಭಾಗ, ವಿಭೀಷಣನ ಮನೆ, ಅಶೋಕವನ ಉಳಿಸಿದ್ದಾನೆ.  ಭಗವಂತನ ಪ್ರೀತಿಗೆ ಚೆನ್ನಾಗಿ ಆಹುತಿ ಕೊಟ್ಟಂತೆ.  ಸಮುದ್ರಕ್ಕೆ ಹೋಗಿ ಬಾಲವನ್ನು ಅದ್ದುತ್ತಾರೆ   ಅದೇ ಅಮೃತಸ್ನಾನ ಹನುಮಂತನಿಗೆ.  ಉತ್ತರ ದಿಕ್ಕಿಗೆ ಹಾರಿ ಹೋಗುವಾಗ ರಾಮದೇವರನ್ನು  ಮತ್ತೊಮ್ಮೆ ಸ್ಮರಿಸಿ ಹಾರುತ್ತಾನೆ. ರಾಮಚಂದ್ರನಿಗೆ ಹೂವು  ಅರ್ಚನೆ ಮಾಡಿದ.  ಹಾರಿಬಂದು ನಿಂತಿದ್ದಾನೆ.    ಎಲ್ಲರೂ ಹನುಮಂತನ ಬಳಿಗೆ ಬರುತ್ತಾರೆ.  ಸಂಕ್ಷಿಪ್ತವಾಗಿ ಸೀತಾದೇವಿಯಬಗ್ಗೆ ಎಲ್ಲಾ ಹೇಳಿದ.  ಕೃಶವಾಗಿದ್ದರೂ, ಒಂದೇ ಜಡೆ ಹಾಕಿಕೊಂದಿದ್ದರೂ ಶೋಬಾಯಮಾನವಾಗಿದ್ದಾಲೆ. ಅಂತ ಹೇಳುತ್ತಾನೆ.  ಕಪಿಗಳೆಲ್ಲ ನರ್ತನ ಮಾಡುತ್ತಿದ್ದಾರೆ.  ಕಪಿ ಚೇಷ್ಟೆ ಮಾಡುತ್ತಿದ್ದಾರೆ.  ಅವರ ಬಾಲಗಳನ್ನು ಹಿಡಿಕೊಂಡು ಮುತ್ತುಕೊಡುತ್ತಿದ್ದಾರೆ. ವೀರ್ಯವಂತ ಅಂತ ಕೊಂಡಾಡುತ್ತಿದ್ದಾರೆ.  ದಕ್ಷಿಣದಿಕ್ಕಿಗೆ ತಿರುಗಿ ಸೀತಾದೇವಿಗೆ ನಮಸ್ಕಾರಮಾಡಿ ಹೇಳುವುದಿಕ್ಕೆ ಶುರುವು ಮಾಡಿದ.  ವಾಲ್ಮೀಕಿ ಕಂಡ ಸುಂದರಕಾಡವನ್ನು ಮತ್ತೆ ಹೇಳುತ್ತಾನೆ ಹನುಮಂತ.

ಲಂಕಾದಹನ ಸಂದೇಶ - ನಮ್ಮ ದೇಹವೆ ಲಂಕ, ಅನೇಕ ಬಲ ರಾಕ್ಷಸರಿದ್ದಾರೆ.  ಅವರನ್ನು ಸುಟ್ಟು ಹಾಕಿದ್ದಾನೆ.   ವಿಭೀಷನನ್ನು ಉಳಿಸಿದ್ದಾನೆ.  ಇಲ್ಲಿ ಸುಡುವದು ಜ್ಞಾನವೆಂಬಂತ ಅಗ್ನಿ ಒಳಗೆ ಬಂದಾಗ ಒಳಗೆ ಇರುವ ರಾಕ್ಷಸರು ರಜೋಗುಣ, ತಮೋಗುಣ ಹೋಗಿ ಸಾತ್ವಿಕಗುಣ ಉಳಿಯುತ್ತದೆ.

  ಬೆಳಿಗ್ಗೆ ಜೂಜಾಡಬೇಕು-ಮಹಾಭಾರತ ಕಥೆ ಕೇಳಬೇಕು; ಮಧ್ಯಾನ್ಯ ಸ್ತ್ರೀಯರನ್ನು ಕೊಂಡಾಡಬೇಕು  - ಸೀತಾದೇವಿಯ ಕಥೆ ಕೇಳಬೇಕು; ರಾತ್ರಿ ಕಳ್ಳತನ ಮಾಡಬೇಕು - ಚೋರ ಎನಿಸಿಕೊಂಡಿರುವ ಭಾಗವತದಲ್ಲಿ ಬಂದಿರುವ ಕೃಷ್ಣನ ಕಥೆಯನ್ನು ಕೇಳಬೇಕು.  ರಾಮನಾಮದ ಮಹತ್ವ ಹೇಳಿದೆ ಸುಂದರಕಾಂಡ.

ವೇದವು ರಾಮಯಣ ರೂಪದಲ್ಲಿ ಬಂದಿದೆ.

ಶೀ ಕೃಷ್ಣಾರ್ಪನಮತು

 tippanni: J.Sudhindra Simha

ಸಂtippaNiಕಲನ: - ಜೆ. ಸುಧೀಂದ್ರ ಸಿಂಹ, ಬೆಂಗಳೂರು. 

 

Featured Post

Sarvamoola grantha parichaya

Sarvamoola Granthagala parichaya By Shri Nagendrachar   To understand Bhagavantha is a great sadhana.   In the ancient days people w...